ಮನೆ ಕಾನೂನು ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ತೀರ್ಪು

ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ತೀರ್ಪು

0

ಪಾಂಡವಪುರ:ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಕೊಲೆಗೈದಿದ್ದ ಆರೋಪಿಗೆ ಶ್ರೀರಂಗಪಟ್ದಣ ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ೫ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

Join Our Whatsapp Group


ಪಟ್ಟಣದ ಗ್ರೀನ್ ಪಾರ್ಕ್ ಹೊಟೇಲ್‌ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದ ಪಟ್ಟಣದ ಶಾಂತಿನಗರ ನಿವಾಸಿ (ಮೂಲ ನಾಗಮಂಗಲ ತಾಲೂಕಿನ ಪಡುವಲಪಟ್ಟಣ) ಕೃಷ್ಣ ಅಲಿಯಾಸ್ ರವಿ ಶಿಕ್ಷೆಗೆ ಗುರಿಯಾದ ಆರೋಪಿ.
ಆರೋಪಿ ಕೃಷ್ಣ ಮತ್ತು ಅದೇ ಹೊಟೇಲ್‌ನಲ್ಲಿ ಸಪ್ಲೇಯರ್ ಆಗಿದ್ದ ಚಾಮರಾಜನಗರ ಮೂಲದ ಮಂಜ ಇಬ್ಬರ ನಡುವೆ ಗ್ರಾಹಕರು ನೀಡುವ ಟಿಪ್ಸ್ ವಿಚಾರವಾಗಿ ಜಗಳ ನಡೆಯುತ್ತಿತ್ತು.ಇದರಿಂದ ಆರೋಪಿ ಕೃಷ್ಣ ತನ್ನ ಸಹೋದ್ಯೋಗಿ ಮಂಜನನ್ನು ತರಕಾರಿ ಕತ್ತರಿಸುವ ಚಾಕುವಿನಿಂದ ಅಕ್ಟೋಬರ್೩, ೨೦೨೨ ರಂದು ರಾತ್ರಿ ೧೧ರ ಸಮಯದಲ್ಲಿ ಕತ್ತು ಕ್ಯುಯ್ದು ಕೊಲೆ ಮಾಡಿದ್ದು, ಈ ಬಗ್ಗೆ ಪಾಂಡವಪುರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ತನಿಖೆ ನಡೆಸಿದ ಪೊಲೀಸ್ ಇನ್ಸ್ಪೆಕ್ಟರ್ ಎಚ್.ಆರ್.ವಿವೇಕಾನಂದ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದ್ದಾರೆ.ಸರ್ಕಾರಿ ಅಭಿಯೋಜಕರಾಗಿ ಎಂ.ಕೆ.ಪ್ರಫುಲ್ಲಾ ವಾದ ಮಂಡಿಸಿದ್ದರು.