ಮನೆ ಸುದ್ದಿ ಜಾಲ ಏಕಾಏಕಿ ಗುಡುಗು ಸಿಡಿಲಿನ ಆರ್ಭಟ; ಹೃದಯಾಘಾತಕ್ಕೆ ಶಿಕ್ಷಕ ಬಲಿ

ಏಕಾಏಕಿ ಗುಡುಗು ಸಿಡಿಲಿನ ಆರ್ಭಟ; ಹೃದಯಾಘಾತಕ್ಕೆ ಶಿಕ್ಷಕ ಬಲಿ

0

ದಾವಣಗೆರೆ : ಏಕಾಏಕಿ ಆರಂಭಗೊಂಡ ಗುಡುಗು ಸಿಡಿಲಿನ ಆರ್ಭಟಕ್ಕೆ ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನಾಗರಾಜಪ್ಪ (56) ಮೃತ ದುರ್ದೈವಿ. ಮೇ 17ರ ರಾತ್ರಿ ನಾಗರಾಜಪ್ಪ ಮನೆಯ ಮುಂದೆ ನಿಂತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸಿಡಿಲು ಬಡಿದಿದೆ. ಆ ಶಬ್ದಕ್ಕೆ ಬೆಚ್ಚಿ, ಹೃದಯಾಘಾತವಾಗಿದೆ. ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.