ಮನೆ ಅಪರಾಧ ಬಾಲಕಿಯ ಶಿರಚ್ಛೇದ ಮಾಡಿ ರುಂಡದೊಂದಿಗೆ ಗ್ರಾಮದಲ್ಲಿ ಅಡ್ಡಾಡಿದ ಆರೋಪಿ

ಬಾಲಕಿಯ ಶಿರಚ್ಛೇದ ಮಾಡಿ ರುಂಡದೊಂದಿಗೆ ಗ್ರಾಮದಲ್ಲಿ ಅಡ್ಡಾಡಿದ ಆರೋಪಿ

0

ಸಂಬಲ್‌ಪುರ (ಒಡಿಶಾ):  ಎಂಟು ವರ್ಷದ ಬಾಲಕಿಯ ಶಿರಚ್ಛೇದ ಮಾಡಿ, ಕತ್ತರಿಸಿದ ತಲೆಯೊಂದಿಗೆ ಗ್ರಾಮದೆಲ್ಲೆಡೆ ಅಲೆದಾಡುತ್ತಿದ್ದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಒಡಿಶಾದ ಜಾಜ್‌ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ  ನಡೆದಿದೆ.

ಬೆಳಗಿನ ಜಾವ ಬಾಲಕಿ ಜಮೀನಿಗೆ ತೆರಳಿದ್ದಾಗ ಕೊಡಲಿಯೊಂದಿಗೆ ಅಲ್ಲಿಗೆ ತೆರಳಿದ ಆರೋಪಿ ತಲೆ ಕಡಿದು ಹತ್ಯೆ ಮಾಡಿರುವುದಲ್ಲದೇ ಮುಂಡದಿಂದ ಬೇರ್ಪಟ್ಟ ರುಂಡವನ್ನು ಹಿಡಿದುಕೊಂಡು ಊರೂರು ಅಲೆದು, ಕೊಳವೆ ಬಾವಿಯ ಬಳಿ ತೊಳೆದಿದ್ದಾನೆ. ಇದನ್ನು ಕಂಡ ಆರೋಪಿಯ ಪತ್ನಿ, ಆತನೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ಆದರೆ ಆತ ಕೊಡಲಿಯನ್ನು ತೋರಿಸಿ ಬೆದರಿಕೆ ಹಾಕಿದ್ದಾನೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನು ಬಂಧಿಸಿದ್ದಾರೆ. ‘ಪ್ರಾಥಮಿಕ ತನಿಖೆಯಲ್ಲಿ ಆತ ಮದ್ಯವ್ಯಸನಿಯಾಗಿದ್ದ, ಆದರೆ ಮೃತ ಬಾಲಕಿಯ ಕುಟುಂಬದೊಂದಿಗೆ ಯಾವುದೇ ದ್ವೇಷವನ್ನು ಹೊಂದಿರಲಿಲ್ಲ. ಆರೋಪಿ ಏಕೆ ಈ ಕೃತ್ಯ ಎಸಗಿದ ಎಂಬುದನ್ನು ನಾವು ಇನ್ನಷ್ಟೇ ಪತ್ತೆಮಾಡಬೇಕಿದೆ’ ಎಂದು ಕುಚಿಂಡ ಉಪವಿಭಾಗದ ಪೊಲೀಸ್ ಅಧಿಕಾರಿ ರಾಜಕಿಶೋರ್ ಮಿಶ್ರಾ ತಿಳಿಸಿದ್ದಾರೆ.

ಆರೋಪಿಯಿಂದ ಆಯುಧವನ್ನು ವಶಪಡಿಸಿಕೊಳ್ಳಲಾಗಿದ್ದು, ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಮನಕಿರಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರೇಮಜೀತ್ ದಾಸ್ ಮಾಹಿತಿ ನೀಡಿದ್ದಾರೆ.

ಹಿಂದಿನ ಲೇಖನಏಪ್ರಿಲ್ 5 ರಂದು ಮೋದಿ ರಾಜ್ಯಕ್ಕೆ ಬರುವ ನಿರೀಕ್ಷೆ: ಸಿಎಂ
ಮುಂದಿನ ಲೇಖನಬಜೆಟ್ ಘೋಷಣೆಗಳ ಶೀಘ್ರ ಅನುಷ್ಠಾನಕ್ಕೆ  ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ  ಸಮಿತಿ ರಚನೆ: ಸಿಎಂ