ಮನೆ ಅಪರಾಧ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಪೊಲೀಸರಿಂದ ಸ್ಥಳ ಮಹಜರ್

ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಪೊಲೀಸರಿಂದ ಸ್ಥಳ ಮಹಜರ್

0

ಬೆಂಗಳೂರು(Bengaluru): ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಸ್ಥಳ ಮಹಜರು ಪ್ರಕ್ರಿಯೆ ಆರಂಭಿಸಿದ್ದಾರೆ.

ಕೃತ್ಯ ನಡೆದ ಸುಂಕದಕಟ್ಟೆಯ ಮುತ್ತೂಟ್ ಫೈನಾನ್ಸ್ ಕಚೇರಿಯಿಂದ, ಆರೋಪಿ ನಾಗೇಶ್ ಆ್ಯಸಿಡ್ ಬಿಸಾಡಿದ ಜಾಗ, ವಕೀಲರ ಭೇಟಿಯಾದ ಜಾಗ, ಬೈಕ್ ಬಿಟ್ಟು ಪರಾರಿಯಾದ ಜಾಗ ಸೇರಿದಂತೆ ಪ್ರತಿಯೊಂದು ಕಡೆಯೂ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಗಿದೆ.

ಕೃತ್ಯದ ಬಳಿಕ ಆರೋಪಿ ಆಶ್ರಯ ಪಡೆದಿದ್ದ ತಿರುವಣ್ಣಾಮಲೈನ ರಮಣಾಶ್ರಮಕ್ಕೆ ಇಂದು ಬೆಳಗ್ಗೆ ಆತನನ್ನು ಕರೆದೊಯ್ಯಲಾಗಿದ್ದು, ಸ್ಥಳ ಮಹಜರು ಬಳಿಕ ಮತ್ತೆ ಆರೋಪಿಯನ್ನು ಪೊಲೀಸರು ಕರೆತರಲಿದ್ದಾರೆ.

ಆರೋಪಿ ನಾಗೇಶನ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, ನಾನು ದೊಡ್ಡ ಪ್ರಮಾದ ಮಾಡಿದ್ದೇನೆ, ಆ ಹುಡುಗಿಗೆ ಆ್ಯಸಿಡ್ ಹಾಕಬೇಕು ಅಂತ ಕನಸು ಮನಸಲ್ಲೂ ಯೋಚಿಸಿರಲಿಲ್ಲ. ನಾನು ಇಂತಹ ಅನ್ಯಾಯ ಮಾಡಬಾರದಿತ್ತು. ನಾನು ಮಾಡಿರೋದು ತಪ್ಪು ಅಂದಿರುವ ನಾಗೇಶ್ ನಾನು ಮಾಡಿದ ತಪ್ಪಿಗೆ ಸದ್ಯ ನನಗೆ ಸಿಕ್ಕಿರೋದು ಕಡಿಮೆ, ಇನ್ನೂ ಶಿಕ್ಷೆ ಆಗಬೇಕು ಎಂದು ಕಣ್ಣೀರಿಟ್ಟಿದ್ದಾನೆ ಎನ್ನಲಾಗಿದೆ.

ಯಾವ ಕಾರಣಕ್ಕೂ ಇಂತಹ ತಪ್ಪು ಮಾಡಲ್ಲ ಶಿಕ್ಷೆ ಅನುಭವಿಸಿಕೊಂಡು, ಒಳ್ಳೆಯವನಾಗಿಯೇ ಇರ್ತೇನಿ, ಮದುವೆಯಾಗಲು ಸಹ ತಾನು ಅರ್ಹನಲ್ಲ ಎಂದು ಪೊಲೀಸರ ಮುಂದೆ ನಾಗೇಶ್ ಹೇಳಿದ್ದಾನೆ ಎನ್ನಲಾಗಿದೆ.

ಹಿಂದಿನ ಲೇಖನತಾಲ್ಲೂಕು ಕೋರ್ಟ್ ನಲ್ಲಿಅಭ್ಯಾಸ ನಡೆಸಿದ್ದ ಸಿದ್ದರಾಮಯ್ಯ ಅವರಿಗೆ  ಆರ್ಥಿಕ ವ್ಯವಸ್ಥೆ ಅರ್ಥವಾಗುತ್ತದೆಯೇ ? : ಪ್ರತಾಪ್ ಸಿಂಹ
ಮುಂದಿನ ಲೇಖನನಗರದೆಲ್ಲೆಡೆ ನಾಲ್ವಡಿ ಕೃಷ್ಣರಾಜ್ ಒಡೆಯರ್ ಜಯಂತಿ ಆಚರಣೆ