ಬೆಂಗಳೂರು: ರೈತರನ್ನು ತಾಂತ್ರಿಕವಾಗಿ, ಆರ್ಥಿಕವಾಗಿ ಸದೃಡ ಮಾಡುವುದು ರಾಜ್ಯ ಸರ್ಕಾರದ ಆಶಯ, ಇದಕ್ಕೆ ಕೃಷಿ ವಿವಿಗಳೂ ಬಲ ತುಂಬಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕರೆ ನೀಡಿದ್ದಾರೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರೊಂದಿಗೆ ಬೆಂಗಳೂರು ಕೃಷಿ ವಿ.ವಿ ಆವರಣದಲ್ಲಿ ಬೇಕರಿ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯ ನೂತನ ಕಟ್ಟಡ ಹಾಗೂ ದೇಸಿ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಾಕೃತಿಕ ವೈಪರಿತ್ಯ ಸೇರಿದಂತೆ ಹಲವು ಕಾರಣಗಳಿಂದ ರೈತರು ಸಂಕಷ್ಟದಲ್ಲಿದ್ದಾರೆ .
ಹಾಗಾಗಿ ಕೃಷಿ ವಿವಿಗಳು ಕೃಷಿಕರಿಗೆ ಹೊಸ ಸಂಶೋಧನೆ ಹಾಗೂ ತಂತ್ರಜ್ಞಾನದ ಮೂಲಕ ನೆರವಾಗುವ ಕೆಲಸ ಮಾಡಬೇಲಿದೆ ಎಂದರು.
ರೈತರು ಸಹ ಸೂಕ್ತ ಮಾರ್ಗದರ್ಶನ, ಲಭ್ಯ ತಂತ್ರಜ್ಞಾನ ಮೂಲಕ ವ್ಯವಸ್ಥಿತ ಬೇಸಾಯ ಅನುಸರಿಸಿದರೆ ಖಂಡಿತ ಲಾಭ ಗಳಿಕೆ ಸಾಧ್ಯವಿದೆ ,ಅಲ್ಲದೆ ಉದ್ಯೋಗ ದಾತರೂ ಆಗಬುದಾಗಿದೆ ಈ ಬಗ್ಗೆ ಅರಿವು ಮೂಡಿದುವ ಕೆಲಸವನ್ನು ಕೃಷಿ ವಿವಿ ಗಳು,ಇಲಾಖಾ ಅಧಿಕಾರಿಗಳು ಮಾಡಬೇಕಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಬೇಕರಿ ಉತ್ಪನ್ನಗಳಿಗೆ ಎಲ್ಲೆಡೆ ಬೇಡಿಕೆ ವೃದ್ದಿಸುತ್ತಿದೆ ಆದರೆ ದೇಸಿಯ ಆಹಾರ ಉತ್ಪನ್ನಗಳನ್ನು ಹೆಚ್ಚು ಬಳಸಿ ಮೌಲ್ಯ ವರ್ಧನೆ ಮಾಡುವ ಮೂಲಕ ನಮ್ಮ ರೈತರಿಗೆ ನೆರವಾಗಬೇಕು ಎಂದು ಸಚಿವರು ಸಲಹೆ ನೀಡಿದರು.
ಕೃಷಿಕರ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಕೃಷಿ ಭಾಗ್ಯ , ಕೃಷಿ ನವೋದ್ಯಮ ಪ್ರೋತ್ಸಾಹ ,ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಟಾನ ಮಾಡುತ್ತಿದೆ.
ಜೊತೆಗೆ ಕೃಷಿ ವಿವಿಗಳೂ ನಿರಂತರ ಸಂಶೋಧನೆ ನಡೆಸಿ ರೈತರಿಗೆ ನೆರವಾಗುತ್ತಿವೆ ಇದರ ಅನುಕೂಲಗಳನ್ನು ರೈತರು ಪಡೆಯಬೇಕುಎಂದು ಸಚಿವರು ಹೇಳಿದರು.
ರಸ ಗೊಬ್ಬರ ಹಾಗೂ ಕೃಷಿ ಉಪಕರಣಗಳ ಮಾರಾಟಗಾರರಿಗೆ ಕೃಷಿ ನೈಪುಣ್ಯತೆ ಹಾಗೂ ತಾಂತ್ರಿಕ ತರಬೇತಿ ನೀಡಲು ದೇಸಿ ಸಮ್ಮೇಳನ ನೀಡಲಾಗುತಿದ್ದು ಇದರ ಲಾಭವನ್ನು ಗ್ರಾಮೀಣ ಕೃಷಿಕರಿಗೆ ವರ್ಗಾವಣೆ ಮಾಡಬೇಕಿದೆ ಎಂದು ಕರೆ ನೀಡಿದರು.
ಹೈದ್ರಾಬಾದ್ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆಯ ಮಹಾನಿರ್ದೇಶಕರು ಡಾ.ಪಿ.ಚಂದ್ರಶೇಖರ್ಶಾ ಸಕರಾದ ನರೇಂದ್ರಸ್ವಾಮಿ ,ಶರತ್ ಬಚ್ಚೆಗೌಡ, ಕೃಷಿ ವಿವಿ ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಾಟೀಲ್, ಬೆಂಗಳೂರು ಕೃಷಿ ವಿವಿ ಕುಲಪತಿ ಸುರೇಶ್, ಕೃಷಿ ವಿವಿಯ ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಟಿ.ಕೆ ಪ್ರಭಾಕರ್ ಶೆಟ್ಟಿ, ಉಲ್ಲಾಸ್, ಚಂದ್ರೆಗೌಡ, ರಾಘವೇಂದ್ರ, ಹಾಗು ಬೆಂಗಳೂರು ಕೃಷಿ ವಿವಿ ಕುಲಸಚಿವ ಡಾ. ಬಸವೇಗೌಡ ಭಾಗವಹಿಸಿದ್ದರು.
ಇದೇ ವೇಳೆ ಮುಂದಿನ ತಿಂಗಳು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುವ ಕೃಷಿ ಮೇಳದ ಲಾಂಛನವನ್ನು ಮುಖ್ಯಮಂತ್ರಿಗಳು ಅನಾವರಣ ಗೊಳಿಸಿದರು.
ಕೆ ಸುಧಾಕರ್ ಗೆ ಗಂಡಾಂತರ.
ಕಾಂಗ್ರೆಸ್ ಕಾರ್ಯಕರ್ತರಿಗೆ ಐಟಿ ಕಿರುಕುಳ
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ದ್ವಂಸ
ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ……
'ಕೈ' ಪರ ಪ್ರಚಾರದಲ್ಲಿದ್ದಾಗ ತಡೆದ ಬಿಜೆಪಿ ಕಾರ್ಯಕರ್ತರು….
ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ರಾಪಿಡೋ ವತಿಯಿಂದ ಸಿಹಿ ಸುದ್ದಿ
ಏಪ್ರಿಲ್ 26ಕ್ಕೆ ಏನೆಲ್ಲ ಲಭ್ಯವಿರುತ್ತದೆ….
ಲಂಡನ್ನಲ್ಲಿ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ.
ಲೋಕಸಭಾ ಚುನಾವಣೆಗೆ ಬೆಂಗಳೂರಿನಲ್ಲಿ ನಿಷೇಧಾಗ್ನೆ ಜಾರಿ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.