ದಕ್ಷಿಣ ಕನ್ನಡ: ಚಿಕ್ಕಮ್ಮನ ಮೇಲೆಯೇ ಬಾಲಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿ, ಸಹಕರಿಸದ ಹಿನ್ನಲೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಪೆರ್ನೆಯ ಬಿಳಿಯೂರು ಎಂಬಲ್ಲಿ ನಡೆದಿದೆ.
ಹೇಮಾವತಿ(37) ಕೊಲೆಯಾದ ಮಹಿಳೆ.
ಜೂ.17 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಮೊದಲು ಮನೆ ಮಂದಿ ಎಲ್ಲರೂ ಪೋಲೀಸರಿಗೆ ಹೃದಯಾಘಾತದಿಂದ ಸಾವು ಎನ್ನುವ ಮಾಹಿತಿ ನೀಡಿದ್ದರು. ಆದರೆ, ಮೃತದೇಹವನ್ನು ಪರಿಶೀಲಿಸಿದ ಸಂದರ್ಭದಲ್ಲಿ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ವಿಚಾರಣೆಯ ವೇಳೆ ಬಾಲಕ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಅತ್ಯಾಚಾರದ ಕೃತ್ಯ ಬಯಲಾಗುವ ಭಯದಲ್ಲಿ ಈ ರೀತಿ ಮಾಡಿದೆ ಎಂದಿದ್ದಾನೆ.
ಈ ಕುರಿತು ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.