ಮನೆ ಅಪರಾಧ ಬಸ್- ದ್ವಿಚಕ್ರ ವಾಹನ ಡಿಕ್ಕಿ: ತಂದೆ, ಮಗ ಸ್ಥಳದಲ್ಲೇ ಸಾವು

ಬಸ್- ದ್ವಿಚಕ್ರ ವಾಹನ ಡಿಕ್ಕಿ: ತಂದೆ, ಮಗ ಸ್ಥಳದಲ್ಲೇ ಸಾವು

0

ರಾಯಚೂರು(Raichuru): ಸಾರಿಗೆ ಸಂಸ್ಥೆ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಾದ ತಂದೆ, ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ಜಿಲ್ಲೆಯ ದೇವದುರ್ಗ ತಾಲೂಕಿನ ವಂದಲಿ-ಹೊಸೂರು ಗ್ರಾಮ ಬಳಿ ಜರುಗಿದೆ.

ವಂದಲಿ-ಹೊಸೂರು ಗ್ರಾಮದ ತಂದೆ ರಮೇಶ ಹಾಗೂ ಮಗ ಅಮರೇಶ ಮೃತರು. ಅಪ್ಪ-ಮಗ ಇಬ್ಬರೂ ತಮ್ಮ ಮನೆಯಲ್ಲಿರುವ ಜಾನುವಾರುಗಳಿಗೆ ಮೇವು ತರಲು ಬೈಕ್​ನಲ್ಲಿ ಹೊಲಕ್ಕೆ ತೆರಳಿದ್ದರು. ಮೇವು ತೆಗೆದುಕೊಂಡು ವಾಪಸ್ ಮನೆಗೆ ಬರುವಾಗ ಬೈಕ್​ಗೆ ಬಸ್ ಡಿಕ್ಕಿ ಹೊಡೆದಿದೆ.

ಈ ಕುರಿತು ಘಟನಾ ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಹಿಂದಿನ ಲೇಖನನಕಲಿ ಪ್ರಮಾಣ ಪತ್ರ ನೀಡಿ ಮುಂಬಡ್ತಿ: ತಾಲ್ಲೂಕು ಯೋಜನಾಧಿಕಾರಿ ಬಂಧನ
ಮುಂದಿನ ಲೇಖನಸುಪ್ರೀಂ ಕೋರ್ಟ್ ವಿಶೇಷ ಕರ್ತವ್ಯಾಧಿಕಾರಿಯಾಗಿ ಕೆಎಸ್’ಎಲ್’ಎಸ್’ಎ ಸದಸ್ಯ ಕಾರ್ಯದರ್ಶಿ ನ್ಯಾ. ಶಶಿಧರ ಶೆಟ್ಟಿ ನೇಮಕ