ಮನೆ ರಾಜ್ಯ ಮಂಡ್ಯ ಎಂಪಿ ಚುನಾವಣೆಯ ಸಂಚಾಲಕರಾಗಿ ಸಿ.ಪಿ.ಉಮೇಶ್ ನೇಮಕ

ಮಂಡ್ಯ ಎಂಪಿ ಚುನಾವಣೆಯ ಸಂಚಾಲಕರಾಗಿ ಸಿ.ಪಿ.ಉಮೇಶ್ ನೇಮಕ

0

ಮಂಡ್ಯ:ಜಿಲ್ಲಾ ಬಿಜೆಪಿ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಅವರನ್ನು ಮಂಡ್ಯ ಲೋಕಸಭಾ ಚುನಾವಣೆಯ ಸಂಚಾಲಕರನ್ನಾಗಿ ರಾಜ್ಯ ಬಿಜೆಪಿ ಘಟಕ ನೇಮಕ ಮಾಡಿದೆ.


ಸಿ.ಪಿ.ಉಮೇಶ್ ಅವರು ಜಿಲ್ಲಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಸದೃಢಗೊಳಿಸಿ, ಕಾರ್ಯಕರ್ತರನ್ನು ಒಗ್ಗೂಡಿಸುವುದರ ಜತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚು ಮತಗಳನ್ನು ಪಡೆಯಲು ಶ್ರಮಿಸಿದ್ದರು.ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಅವರಿದ್ದರೂ ಸಹ ಇವರು ಪಕ್ಷದಲ್ಲಿ ತಂದಿದ್ದ ಒಗ್ಗಟ್ಟು ಹಾಗೂ ಎಲ್ಲ ರಾಜಕೀಯ ಪಕ್ಷಗಳ ನಾಯಕರ ಜತೆ ಉತ್ತಮ ಒಡನಾಟ ಹೊಂದಿರುವುದನ್ನು ಮನಗಂಡು, ಜಾ.ದಳ- ಬಿಜೆಪಿ ಮೈತ್ರಿ ಕೂಟದ ಅಭ್ಯರ್ಥಿಯ ಗೆಲುವಿಗಾಗಿ ಲೋಕಸಭಾ ಚುನಾವಣೆಯ ಸಂಚಾಲಕರನ್ನಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನೇಮಕ ಮಾಡಿದ್ದಾರೆ.

ಹಿಂದಿನ ಲೇಖನಮೈಸೂರು ಫೆಸ್ಟ್ ಕಾರ್ಯಕ್ರಮದಲ್ಲಿ ಜಾರ್ಜಿಯನ್ ತಂಡದವರಿಂದ ಸಾಂಸ್ಕೃತಿಕ ಪ್ರದರ್ಶನ
ಮುಂದಿನ ಲೇಖನಜಾರ್ಖಂಡ್‌ ಸಿಎಂ ಹೇಮಂತ್‌ ಸೊರೆನ್‌ ಗೆ ಮತ್ತೆ ಇ.ಡಿ. ಸಮನ್ಸ್‌