ಮನೆ ರಾಜ್ಯ ಚಾಮರಾಜನಗರ: ಹಾಡುಹಗಲೇ ಚಿನ್ನದ ವ್ಯಾಪಾರಿ ಕಾರು ಅಡ್ಡಗಟ್ಟಿ ದರೋಡೆ- ನಾಲ್ವರ ಬಂಧನ

ಚಾಮರಾಜನಗರ: ಹಾಡುಹಗಲೇ ಚಿನ್ನದ ವ್ಯಾಪಾರಿ ಕಾರು ಅಡ್ಡಗಟ್ಟಿ ದರೋಡೆ- ನಾಲ್ವರ ಬಂಧನ

0

ಚಾಮರಾಜನಗರ: ಚಿನ್ನದ ವ್ಯಾಪಾರಿಯೊಬ್ಬರು ಕಾರಿನಲ್ಲಿ ಹೋಗುವಾಗ ಅಡ್ಡಗಟ್ಟಿದ ದುಷ್ಕರ್ಮಿಗಳು 40 ಲಕ್ಷ ರೂ ದೋಚಿ ಪರಾರಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಹಾಡುಹಗಲೇ ನಡೆದಿದೆ.

ಕೇರಳ ಮೂಲದ ನಂಬರ್ ಪ್ಲೇಟ್ ಹೊಂದಿದ್ದ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು 40 ಲಕ್ಷ ರೂಪಾಯಿಯನ್ನು ದೋಚಿ ಪರಾರಿಯಾಗಿದ್ದರು.  ಕೇರಳ ಮೂಲದ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು. ಈ ಕುರಿತು ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಸೋಮಹಳ್ಳಿ ಗ್ರಾಮಸ್ಥರು ನಾಲ್ವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಹಿಂದಿನ ಲೇಖನಪುಣ್ಯ ಕ್ಷೇತ್ರಗಳು: ಶಿವಗಂಗೆ
ಮುಂದಿನ ಲೇಖನರಾತ್ರಿ ವೇಳೆ ಹೆಣ್ಣುಮಕ್ಕಳ ರಕ್ಷಣೆಗೆ ನಿಂತ ಮೇಟಗಳ್ಳಿ ಮಹಿಳಾ ಪೊಲೀಸ್ ಸಿಬ್ಬಂದಿ