ನಂದೂರ್ ಬಾರ್ ಮಹಾರಾಷ್ಟ್ರ: ಹಿಂದೂ ನಂಬಿಕೆಯನ್ನು ತೊಡೆದುಹಾಕಲು ಕಾಂಗ್ರೆಸ್ ಷಡ್ಯಂತ್ರದಲ್ಲಿ ತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹಾರಾಷ್ಟ್ರದ ನಂದೂರ್ಬಾರ್ನಲ್ಲಿ ಇಂದು (ಶುಕ್ರವಾರ) ಚುನಾವಣಾ ರ್ಯಾಲಿಯಲ್ಲಿ ಮಾತನಾಡಿ, ರಾಮ ಮಂದಿರ ನಿರ್ಮಾಣವು ಭಾರತದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಶೆಹಜಾದೆ (ರಾಹುಲ್ ಗಾಂಧಿ) ಗುರುಗಳು ಅಮೆರಿಕಕ್ಕೆ ಹೇಳಿದ್ದಾರೆ ಎಂದಿದ್ದಾರೆ.
ಅದೇ ವೇಳೆ ಉದ್ಧವ್ ಠಾಕ್ರೆ ಶಿವಸೇನಾ ಬಣದ ವಿರುದ್ಧ ವ್ಯಂಗ್ಯವಾಡಿದ ಅವರು, ಉದ್ಧವ್ ಬಣವನ್ನು ನಕಲಿ ಶಿವಸೇನೆ ಎಂದಿದ್ದಾರೆ. “ನಕಲಿ ಶಿವಸೇನೆಯವರು ನನ್ನನ್ನು ಜೀವಂತ ಸಮಾಧಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ ಪ್ರಧಾನಿ.
ಕಾಂಗ್ರೆಸ್ನ ಮನಸ್ಥಿತಿ ನೋಡಿ, ರಾಮನ ದೇಶದಲ್ಲಿ ರಾಮಮಂದಿರವನ್ನು ದೇಶವಿರೋಧಿ ಎಂದು ಕರೆಯುತ್ತಿದ್ದಾರೆ. ಸರ್ಕಾರಿ ಇಫ್ತಾರಿ’ಯನ್ನು ಆಯೋಜಿಸುವ, ಭಯೋತ್ಪಾದಕರ ಸಮಾಧಿಯನ್ನು ಶೃಂಗಾರಗೊಳಿಸುವವರು ನಮ್ಮ ಪ್ರಭು ರಾಮನನ್ನು, ಆತನ ಮಂದಿರ ಮತ್ತು ರಾಮ ಮಂದಿರಕ್ಕೆ ಹೋಗುವವರು ದೇಶವಿರೋಧಿಗಳು ಎಂದು ಕರೆಯುತ್ತಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
ನಾನು ಅತ್ಯಂತ ಜವಾಬ್ದಾರಿಯಿಂದ ಒಂದು ಮಾತು ಹೇಳಲು ಬಯಸುತ್ತೇನೆ. ಅದು ಎಸ್ ಸಿ, ಎಸ್ ಟಿ ಅಥವಾ ಒಬಿಸಿಯೇ ಆಗಿರಲಿ, ‘ವಂಚಿತ್ ಕಾ ಜೋ ಅಧಿಕಾರ್ ಹೈ, ಮೋದಿ ಉಸ್ಕಾ ಚೌಕಿದಾರ್ ಹೈ. (ವಂಚಿತರ ಹಕ್ಕನ್ನು ಸಂರಕ್ಷಿಸುವವರೇ ಮೋದಿ) ಎಂದು ಹೇಳಿದ್ದಾರೆ.
ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ವಿರುದ್ಧ ಟೀಕಾ ಪ್ರಹಾರ ಮಾಡಿದ್ದು, ಎಸ್ ಸಿ, ಎಸ್ ಟಿ ಮತ್ತು ಒಬಿಸಿ ಮೀಸಲಾತಿಯನ್ನು ವಿಭಜಿಸುವುದಿಲ್ಲ ಎಂದು ಲಿಖಿತವಾಗಿ ನೀಡುವಂತೆ ಕಾಂಗ್ರೆಸ್ ಪಕ್ಷಕ್ಕೆ ಕೇಳಿದ್ದೇನೆ ಎಂದು ಹೇಳಿದರು. ಕಾಂಗ್ರೆಸ್ ನ ಮೌನ ಹಿಡನ್ ಅಜೆಂಡಾವನ್ನು ಹೊಂದಿದೆ ಎಂದು ತೋರಿಸುತ್ತದೆ ಎಂದಿದ್ದಾರೆ ಮೋದಿ.
ಯೇ ಮಹಾ ಅಘಾಡಿ, ಆರಕ್ಷಣ್ ಕೆ ಮಹಾ ಬಕ್ಷಣ್ ಕಾ ಮಹಾ ಅಭಿಯಾನ್ ಚಲಾ ರಹೀ ಹೈ'( ಈ ಮಹಾ ಅಘಾಡಿ ಮೀಸಲಾತಿಯನ್ನು ನುಂಗಿಹಾಕುವುದಕ್ಕೆ ಮಹಾ ಅಭಿಯಾನ ಮಾಡುತ್ತಿದೆ). ಆದರೆ ಎಸ್ಸಿ, ಎಸ್ಟಿ ಮತ್ತು ಒಬಿಸಿ ಮೀಸಲಾತಿಯನ್ನು ರಕ್ಷಿಸಲು, ಮೋದಿ ‘ಆರಕ್ಷಣ್ ಕೆ ಮಹಾ ರಕ್ಷಣಾ ಕಾ ಮಹಾ ಯಜ್ಞ ಕರ್ ರಹಾ ಹೈ’.(ಮೀಸಲಾತಿಯ ರಕ್ಷಣೆಗೆ ಮಹಾಯಜ್ಞ ಮಾಡುತ್ತಿದ್ದಾರೆ ಮೋದಿ). ನಾನು ಕಾಂಗ್ರೆಸ್ಗೆ ಸವಾಲು ಹಾಕುತ್ತಿದ್ದೇನೆ. ಕಳೆದ 17 ದಿನಗಳ ಹಿಂದೆ ಎಸ್ಸಿ, ಎಸ್ಟಿ ಮತ್ತು ಒಬಿಸಿ ಮೀಸಲಾತಿಯನ್ನು ವಿಭಜಿಸಿ ಮುಸ್ಲಿಮರಿಗೆ ನೀಡುವುದಿಲ್ಲ ಎಂದು ಲಿಖಿತವಾಗಿ ನೀಡುವಂತೆ ಕೇಳಿದ್ದೆ, ಆದರೆ ಅವರು ನನ್ನ ಸವಾಲಿಗೆ ಉತ್ತರಿಸುತ್ತಿಲ್ಲ. ಅವರು ಹಿಡನ್ ಅಜೆಂಡಾವನ್ನು ಹೊಂದಿರುತ್ತಾರೆ ಎಂದಿದ್ದಾರೆ.
ಬುಡಕಟ್ಟು ಸಮುದಾಯಕ್ಕೆ ಸಹಾಯ ಮಾಡುವುದು ನನ್ನ ಕುಟುಂಬದ ಸದಸ್ಯರಿಗೆ ಸೇವೆ ಮಾಡಿದಂತೆ
ಅಭಿವೃದ್ಧಿ ವಿಚಾರದಲ್ಲಿ ಮೋದಿಗೆ ಪೈಪೋಟಿ ನೀಡಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ಗೆ ಗೊತ್ತು. ಹೀಗಾಗಿ ಈ ಚುನಾವಣೆಯಲ್ಲಿ ಅವರು ಸುಳ್ಳಿನ ಕಾರ್ಖಾನೆ ತೆರೆದಿದ್ದಾರೆ. ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಸ್ಥಿತಿ ‘ಚೋರ್ ಮಚಾಯೇ ಶೋರ್’ ಎಂಬಂತಾಗಿದೆ. ಧರ್ಮಾಧಾರಿತ ಮೀಸಲಾತಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಕ್ಕೆ ವಿರುದ್ಧವಾಗಿದೆ. ಸಂವಿಧಾನ ರೂಪಿಸಿದವರ ಬೆನ್ನಿಗೆ ಚೂರಿ ಹಾಕಿದಂತಿದೆ. ಇದು ಲೆಕ್ಕಹಾಕಲಾಗದ ಪಾಪ ಎಂದು ಮೋದಿ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪೂರೈಸಿದ್ದು ವರ್ಷ ಸಾಧಿಸಿದ್ದು ಶೂನ್ಯ – ಬಿವೈವಿ
ಮೋದಿ ನೇತೃತ್ವದ BJP 430 ಸೀಟ್ ಗೆಲ್ಲುತ್ತೆ ಎಂದ ಚೀನಾ….
ನಮ್ಮ ಹೆಮ್ಮೆಯ ಮೈಸೂರು
ಒಂದು ಅದ್ಭುತ. ಫುಟ್ಬಾಲ್ನ ಸಂಯೋಜನೆ..
ಬಾಗಲಕೋಟೆಯಲ್ಲಿ ಬೃಹತ್ ಮೊಸಳೆಯ ರಕ್ಷಣೆ
ಡಿಕೆಶಿ ವಿರುದ್ಧ ದೇವರಾಜೇಗೌಡ ಇನ್ನೊಂದು ಬಾಂಬ್…!
ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ
ಅಭಿವೃದ್ಧಿಗೆ ಮತ ನೀಡಿ ಎಂದ ರಶ್ಮಿಕ ಮಂದಣ್ಣ
SSLCಗೆ ಇನ್ನಿರಲ ಗ್ರೇಸ್ ಮಾರ್ಕ್ಸ್
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.