ಮನೆ ರಾಜಕೀಯ ಉಪ ಚುನಾವಣೆಯಲ್ಲಿ ನಿರಂತರ ಸೋಲು: ಉತ್ತಮ ಫಲಿತಾಂಶ ನೀಡದ ನಾಯಕರನ್ನು ಕಿತ್ತೊಗೆಯಲು ಜೆಡಿಎಸ್ ನಿರ್ಧಾರ

ಉಪ ಚುನಾವಣೆಯಲ್ಲಿ ನಿರಂತರ ಸೋಲು: ಉತ್ತಮ ಫಲಿತಾಂಶ ನೀಡದ ನಾಯಕರನ್ನು ಕಿತ್ತೊಗೆಯಲು ಜೆಡಿಎಸ್ ನಿರ್ಧಾರ

0

ಬೆಂಗಳೂರು: ಇತ್ತೀಚೆಗೆ ನಡೆದ ಹಲವು ಉಪ ಚುನಾವಣೆಗಳಲ್ಲಿ ನಿರಂತರ ಸೋಲು ಕಂಡಿರುವ ಜೆಡಿಎಸ್ ಪಕ್ಷವನ್ನು ಬಲಪಡಿಸುವ ಕಾರಣಕ್ಕಾಗಿ ಉತ್ತಮ ಫಲಿತಾಂಶ ನೀಡದ ನಾಯಕರನ್ನು ಕಿತ್ತೊಗೆಯಲು ತೀರ್ಮಾನಿಸಿದೆ.

ನಗರದ ಜೆಪಿ ಭವನದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿರುವ ವರಿಷ್ಠರು, ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ನಾಯಕರು ಉತ್ತಮ ಫಲಿತಾಂಶ ನೀಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಅವರನ್ನೆಲ್ಲಾ ಕಿತ್ತೊಗೆಯಲು ನಿರ್ಧರಿಸಿದ್ದಾರೆ.

ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಮತ್ತು ವಿಧಾನಸಭೆ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ವಿಧಾನಸಭೆ ಚುನಾವಣೆಗೆ ಕೇವಲ ಇನ್ನೂ 15 ತಿಂಗಳು ಬಾಕಿ ಇದ್ದು ಪಕ್ಷವನ್ನು ಸಮರ್ಥವಾಗಿಸಲು ದಿನನಿತ್ಯದ ಕಾರ್ಯಚಟುವಟಿಕೆಗಳು ಮತ್ತು ಸವಾಲುಗಳನ್ನು ಎದುರಿಸಲು ಕೋರ್ ಕಮಿಟಿಯನ್ನು ನೇಮಿಸಲಿದೆ.

ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಎಚ್‌ಕೆ ಕುಮಾರಸ್ವಾಮಿ ತಿಳಿಸಿದ್ದಾರೆ. ಹೊಸದಾಗಿ ನೇಮಕಗೊಂಡವರ ಪಟ್ಟಿಯನ್ನು ಸುಮಾರು ಒಂದು ವಾರದ ನಂತರ ಹೊರತರುವುದಾಗಿ ಹೇಳಿದ್ದಾರೆ.

ಪಕ್ಷವನ್ನು ಬಲಪಡಿಸಲು ಹಾಗೂ ಅಧಿಕಾರಕ್ಕೆ ತರಲು ಕಳೆದ ಕೆಲವು ವಾರಗಳಿಂದ ಜೆಡಿಎಸ್ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲುವುದಾಗಿ ಜೆಡಿಎಸ್ ಘೋಷಿಸಿತ್ತು.

ಜನತಾ ಪಕ್ಷದ ಹೊಸ ಅಧ್ಯಕ್ಷೆಯಾಗಿ ಬಿಟಿ ಲಲಿತಾ ನಾಯಕ್ ನೇಮಕಗೊಂಡಿದ್ದಾರೆ. ನೇಗಿಲು ಹೊತ್ತ ರೈತ ಈ ಪಕ್ಷದ ಚಿಹ್ನೆಯಾಗಿದೆ. ಜಯಪ್ರಕಾಶ್ ಬಂಧು ಇದರ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬೇರೆ ಪಕ್ಷಗಳ ಜೊತೆ ಕೈಜೋಡಿಸುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದು ಲಲಿತಾ ನಾಯಕ್ ತಿಳಿಸಿದ್ದಾರೆ.

ಹಿಂದಿನ ಲೇಖನಕೊರೊನಾ: ದೇಶದಲ್ಲಿಂದು 3.17 ಲಕ್ಷಕ್ಕೆ ಸೋಂಕಿತರ ಸಂಖ್ಯೆ ಏರಿಕೆ
ಮುಂದಿನ ಲೇಖನಗಾಂಜಾ ಮಾರಾಟದಲ್ಲಿ ಪೇದೆಗಳು ಸಿಕ್ಕಿಬಿದ್ದ ಪ್ರಕರಣ: ತನಿಖಾಧಿಕಾರಿಗಳ ಅಮಾನತು, ಡಿಸಿಪಿಗಳಿಗೆ ನೋಟಿಸ್