ಮನೆ ಅಪರಾಧ ಆಕಸ್ಮಿಕ ಬೆಂಕಿ ತಗುಲಿ ವಿವಿಧ ತಳಿಯ ಮರಗಳು ಬೆಂಕಿಗಾಹುತಿ

ಆಕಸ್ಮಿಕ ಬೆಂಕಿ ತಗುಲಿ ವಿವಿಧ ತಳಿಯ ಮರಗಳು ಬೆಂಕಿಗಾಹುತಿ

0

ಹಲಗೂರು:ಆಕಸ್ಮಿಕ ಬೆಂಕಿ ತಗುಲಿ ವಿವಿಧ ತಳಿಯ ಮರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಸಮೀಪದ ಸಾಗ್ಯ ಗ್ರಾಮದಲ್ಲಿ ನಡೆದಿದೆ.


ಸಾಗ್ಯ ಗ್ರಾಮದ ರೈತ ರಾಜಣ್ಣ ಎಂಬುವವರು ತಮ್ಮ ಮೂರು ಎಕರೆ ಜಮೀನಿನಲ್ಲಿ ತೆಂಗು,ಅಡಿಕೆ, ಮಹಘನಿ, ಮಾವು ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಬೆಳೆಸಿದ್ದರು. ತೆಂಗಿನ ಮರಕ್ಕೆ ವಿದ್ಯುತ್ ಸ್ಪರ್ಶ ಆಗಿದ್ದು, ಬೆಂಕಿ ಇಡೀ ತೋಟಕ್ಕೆ ಆವರಿಸಿಕೊಂಡಿದೆ. ತೋಟದಲ್ಲಿ ನೀರು ಹಾಯಿಸಲು ಅಳವಡಿಸಿದ್ದ ಹನಿ ನೀರಾವರಿ ಪೈಪುಗಳು ಸುಟ್ಟು ಹೋಗಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಭೇಟಿ ನೀಡಿ,ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತ ರಾಜಣ್ಣ ಆಗ್ರಹಿಸಿದರು.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಫೆ.7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ
ಮುಂದಿನ ಲೇಖನಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಕರೆತರಲು ಅಧಿಕಾರಿಗಳು ಕ್ರಮವಹಿಸಬೇಕು: ಎಸ್ ಮಧು ಬಂಗಾರಪ್ಪ