ನವದೆಹಲಿ: ಉದ್ದೀಪನ ಮದ್ದು ಸೇವನೆ ಮಾಡಿದ್ದಕ್ಕಾಗಿ ಗೋವಾ ನ್ಯಾಷನಲ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಸ್ಟೀಪಲ್ ಚೇಸರ್ ಮೊಹಮ್ಮದ್ ನೂರ್ ಹಸನ್ ಮತ್ತು ಭಾರತದ ವರ್ಲ್ಡ್ ಕ್ರಾಸ್ ಕಂಟ್ರಿ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿದ ಹೇಮರಾಜ್ ಗುರ್ಜರ್ ಮತ್ತು ಅಂಜಲಿ ಕುಮಾರಿ ಅವರನ್ನು ತಾತ್ಕಾಲಿಕ ಅಮಾನತುಗೊಳಿಸಲಾಗಿದೆ.
ದೂರ ಓಟಗಾರ ಜಿ. ಲಕ್ಷ್ಮಣನ್ ಮತ್ತು ಸ್ಪ್ರಿಂಟರ್ ಹಿಮಾನಿ ಚಾಂದೆಲ್ ಅವರಿಗೂ ರಾಷ್ಟ್ರೀಯ ಉದ್ದೀಪನ ತಡೆ ಘಟಕವು ಕ್ರಮವಾಗಿ ಎರಡು ಮತ್ತು ನಾಲ್ಕು ವರ್ಷಗಳ ನಿಷೇಧವನ್ನು ವಿಧಿಸಿದೆ.
ಹಸನ್ ಕಳೆದ ವರ್ಷ ಫೆಡರೇಷನ್ ಕಪ್ ಮತ್ತು ರಾಷ್ಟ್ರೀಯ ಓಪನ್ ಚಾಂಪಿಯನ್ಷಿಪ್ಗಳಲ್ಲಿ 3000 ಮೀಟರ್ ಸ್ಟೀಪಲ್ಚೇಸ್ ಚಿನ್ನ ಗೆದ್ದಿದ್ದರು. ಗುರ್ಜರ್ ಅವರು ಜನವರಿಯಲ್ಲಿ ಗಯಾದಲ್ಲಿ ರಾಷ್ಟ್ರೀಯ ಕ್ರಾಸ್ ಕಂಟ್ರಿ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದಿದ್ದರು. ಆದರೆ, ಮಾರ್ಚ್ನಲ್ಲಿ ಬೆಲ್ಗ್ರೇಡ್ನಲ್ಲಿ ನಡೆದ ವರ್ಲ್ಡ್ ಕ್ರಾಸ್ ಕಂಟ್ರಿಯಲ್ಲಿ 88ನೇ ಸ್ಥಾನ ಪಡೆದರು. ಅಂಜಲಿ ಕುಮಾರಿ ಜನವರಿಯಲ್ಲಿ ನಡೆದ ರಾಷ್ಟ್ರೀಯ ಕ್ರಾಸ್ ಕಂಟ್ರಿ ಚಾಂಪಿಯನ್ಷಿಪ್ನಲ್ಲಿ ಎರಡನೇ ಸ್ಥಾನ ಗಳಿಸಿದ್ದರು.
ಪ್ರಜ್ವಲ್ ವಿರುದ್ಧ ಪಕ್ಷದಿಂದ ಕ್ರಮ…
ಹಾಸನದಲ್ಲಿ ಅಭ್ಯರ್ಥಿ ಗೆಲ್ತಾರೆ, ಅದರಲ್ಲಿ ಸಂಶಯ ಇಲ್ಲ…..
ಕುಟುಂಬದ ಹೆಸರು ತರಬೇಡಿ
ಬಾಲ್ಕನಿಯಿಂದ ಅಪಾರ್ಟ್ಮೆಂಟ್ನ ಛವಣಿಗೆ ಬಿದ್ದ ಮಗು ರಕ್ಷಣೆ.
ಸಂಸದ ಶ್ರೀನಿವಾಸ್ ಪ್ರಸಾದ್ ವಿಧಿವಶ.
ಕೆ ಸುಧಾಕರ್ ಗೆ ಗಂಡಾಂತರ.
ಕಾಂಗ್ರೆಸ್ ಕಾರ್ಯಕರ್ತರಿಗೆ ಐಟಿ ಕಿರುಕುಳ
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ದ್ವಂಸ
ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ……
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.