ಮನೆ ಆರೋಗ್ಯ ಹೃದಯ ಸಮಸ್ಯೆಗಳನ್ನು ದೂರ ಇಡಲು ಡ್ರೈ ಫ್ರೂಟ್ಸ್ ಸೇವಿಸಿ

ಹೃದಯ ಸಮಸ್ಯೆಗಳನ್ನು ದೂರ ಇಡಲು ಡ್ರೈ ಫ್ರೂಟ್ಸ್ ಸೇವಿಸಿ

0

ಒಣಬೀಜಗಳು ಅಥವಾ ಡ್ರೈ ಫ್ರೂಟ್ಸ್ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಹೀಗಾಗಿ ಇಂದಿನ ದಿನಗಳಲ್ಲಿ ಬಹುತೇಕ ಜನರು, ರಾತ್ರಿ ಮಲಗುವ ಮುನ್ನ ಕೆಲವೊಂದು ಒಣಬೀಜಗಳನ್ನು ನೆನೆ ಹಾಕಿ, ಮರು ದಿನ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಈ ಅಭ್ಯಾಸದಿಂದ ಆರೋಗ್ಯ ವೃದ್ಧಿಯಾಗುವುದು ಮಾತ್ರವಲ್ಲದೆ, ಮನುಷ್ಯನ ಆರೋಗ್ಯ ವನ್ನು ಅನೇಕ ಕಾಯಿಲೆಗಳಿಂದ ರಕ್ಷಣೆ ಮಾಡುವ ಎಲ್ಲಾ ಗುಣಲಕ್ಷಣಗಳು ಕೂಡ ಇವುಗಳಿಂದ ಸಿಗುತ್ತದೆ.

ಹಾಗಂತ ಈ ಮಾತನ್ನು ನಾವು ಹೇಳುತ್ತಿಲ್ಲ, ಬದಲಿಗೆ ಸ್ವತಃ ಆರೋಗ್ಯ ತಜ್ಞರೇ ಹೇಳುತ್ತಾರೆ. ಪ್ರತಿದಿನ ಡ್ರೈಫ್ರೂಟ್ಸ್ ತಿನ್ನುವ ಅಭ್ಯಾಸ ಇದ್ದವರಿಗೆ ಕೆಲವೊಂದು ವಿಶೇಷ ಬಗೆಯ ಮಾರಕ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ.

ವಾಲ್ನಟ್

• ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿಗಳಂತೆ ವಾಲ್ನೆಟ್ ಕೂಡ ದೇಹದ ಆರೋಗ್ಯಕ್ಕೆ ಬಹಳ ಒಣಫಲ ಎನ್ನುವ ಬಗ್ಗೆ ಎರಡು ಮಾತಿಲ್ಲ. ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಹಿಡಿದು ಇನ್ನಿತರ ಹಲವಾರು ಆರೋಗ್ಯ ಸಮಸ್ಯೆಗಳಿಗೆ ವಾಲ್ನಟ್ ಸೇವನೆಯಿಂದ ಮುಕ್ಕಾಲು ಪಾಲು ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿದೆ

• ಪ್ರಮುಖವಾಗಿ ವಾಲ್ನಟ್ನಲ್ಲಿ ಕೊಬ್ಬಿನಾಂಶ ತುಂಬಾನೇ ಕಡಿಮೆ ಪ್ರಮಾಣದಲ್ಲಿ ಕಂಡು ಬರುವುದರ ಜೊತೆಗೆ ಒಮೆಗಾ-3 ಕೊಬ್ಬಿನಾಮ್ಲ ಅಧಿಕ ಪ್ರಮಾಣದಲ್ಲಿ ಸಿಗುತ್ತದೆ. ಇದು ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಪ್ರಮುಖವಾಗಿ ಒಮೆಗಾ-3 ಕೊಬ್ಬಿನಾಮ್ಲವು ರಕ್ತ ಹೆಪ್ಪುಗಟ್ಟುವುದನ್ನು ತಡೆಯುವುದು.

• ಇನ್ನು ಈ ಬಗ್ಗೆ ಸಂಶೋಧನೆಗಳು ಹೇಳುವ ಹಾಗೆ, ಪ್ರತಿದಿನ ನಿಯಮಿತ ಪ್ರಮಾಣದಲ್ಲಿವಾಲ್ನಟ್ ಬೀಜಗಳನ್ನು ಸೇವನೆ ಮಾಡುವ ಜನರಿಗೆ ಹೃದಯದ ಕಾಯಿಲೆ ಕಂಡುಬರುವ ಸನ್ನಿವೇಶ ಶೇಕಡ 10 ಪ್ರತಿಶತದಷ್ಟು ಕಡಿಮೆ ಇರುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.

ಪಿಸ್ತಾ

• ಆರೋಗ್ಯ ತಜ್ಞರು ಹೇಳುವ ಪ್ರಕಾರ, ಜನರ ಆರೋಗ್ಯದ ವಿಷ್ಯಕ್ಕೆ ಬಂದರೆ, ಡ್ರೈ ಫ್ರೂಟ್ಸ್ಗಳಲ್ಲಿ ಬಾದಾಮಿ ಹಾಗೂ ವಾಲ್ನಟ್ ಬೀಜಗಳಿಗಿಂತಲೂ ಮೊದಲನೆಯ ಸ್ಥಾನದಲ್ಲಿ ಪಿಸ್ತಾ ಬೀಜಗಳು ಬಂದು ನಿಲ್ಲುತ್ತವೆ ಎಂದು ಅಭಿಪ್ರಾಯ ಪಡುತ್ತಾರೆ.

• ಯಾಕೆಂದರೆ ಇವುಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶಗಳು ಸಿಗುವುದರಿಂದ, ಇಂತಹ ಪಿಸ್ತಾ ಬೀಜಗಳನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ, ದೇಹದ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ನಿವಾರಣೆಯಾಗಿ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.

• ಇನ್ನು ಪ್ರಮುಖವಾಗಿ ಈ ಪಿಸ್ತಾ ಬೀಜಗಳಲ್ಲಿ ಅತಿಯಾದ ನಾರಿನಾಂಶ ಹಾಗೂ ಪ್ರೋಟೀನ್ ಅಂಶದ ಜೊತೆಗೆ ಆಂಟಿಆಕ್ಸಿಡೆಂಟ್ ಕೂಡ ಉತ್ತಮ ಪ್ರಮಾಣದಲ್ಲಿದೆ. ಇದರಿಂದಾಗಿ ದೇಹದ ತೂಕ ನಿಯಂತ್ರಣವಾಗುವುದು ಮಾತ್ರವಲ್ಲದೆ, ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕೂಡ ದೂರ ವಾಗುವುದು.

ಬಾದಾಮಿ

• ಆರೋಗ್ಯ ತಜ್ಞರು ಹೇಳುವ ಪ್ರಕಾರ, ರಕ್ತದೊತ್ತಡದ ಸಮಸ್ಯೆ ಇರುವವರು ಅದೇ ರೀತಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಇರುವವರು, ಪ್ರತಿದಿನ ನೆನೆಸಿಟ್ಟ ಬಾದಾಮಿ ಬೀಜಗಳನ್ನು ಸೇವನೆ ಮಾಡುವುದರಿಂದ, ಇಂತಹ ದೀರ್ಘಕಾಲದ ಕಾಯಿಲೆಗಳಿಂದ ದೂರ ಇರಬಹುದು.

• ಇದಕ್ಕಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ ನಾಲ್ಕೈದು ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಹಾಕಿ ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು.

ನೆಲಗಡಲೆ

• ಕಡಲೆಬೀಜ, ನೆಲಗಡಲೆ ಅಥವಾ ಕಡಲೆಕಾಯಿ ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಈ ಬೀಜನಗಳನ್ನು ಪ್ರತಿದಿನ ಸೇವನೆ ಮಾಡುವುದರಿಂದ, ಹಲವಾರು ಆರೋಗ್ಯ ಪ್ರಯೋಜನಗಳು ನಮ್ಮದಾಗುತ್ತದೆ!

• ಉದಾಹರಣೆಗೆ ಹೇಳುವುದಾದರೆ ಈ ಬೀಜಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ವಿಟಮಿನ್ಸ್ ಗಳಾದ ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಬಿ6 ಅಂಶಗಳು ಯತೇಚ್ಛವಾಗಿ ಕಂಡು ಬರುತ್ತದೆ.

• ಇದರ ಜೊತೆಗೆ ಹೃದಯಕ್ಕೆ ಸಹಕಾರಿಯಾಗುವ ಒಳ್ಳೆಯ ಕೊಬ್ಬಿನಾಂಶ, ಪ್ರೋಟೀನ್ ಅಂಶ, ನಾರಿನ ಅಂಶ, ಪೊಟ್ಯಾಶಿಯಂ, ಸೋಡಿಯಂ, ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್ ಅಂಶಗಳು ಸಿಗುವು ದರಿಂದ, ಹೃದಯದ ಆರೋಗ್ಯ ವೃದ್ಧಿಯಲ್ಲಿ ಈ ಬೀಜಗಳ ಪಾತ್ರ ಮರೆಯುವ ಹಾಗಿಲ್ಲ.

ಗೋಡಂಬಿ ಬೀಜಗಳು

• ಗೋಡಂಬಿ ಬೀಜಗಳು ತುಂಬಾನೇ ದುಬಾರಿ, ಆದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೀಗಾಗಿ ಪ್ರತಿದಿನ ಎರಡು ಮೂರು ಗೋಡಂಬಿ ಬೀಜಬಗಳನ್ನು ಸೇವನೆ ಮಾಡಿದರೆ ಅದರಿಂದ ಹೃದಯದ ಕೆಲವು ಸಮಸ್ಯೆಗಳು ಸೇರಿದಂತೆ ವಿವಿಧ ರೀತಿಯ ಕಾಯಿಲೆಗಳು ಕೂಡ ದೂರ ಆಗುತ್ತವೆ ಎಂದು ಅಧ್ಯಯನಗಳು ಹೇಳಿವೆ.

• ನೆನಪಿಡಿ: ಉಪ್ಪು ಮತ್ತು ಎಣ್ಣೆ ಹಾಕದೆ ಇರುವಂತಹ ಗೋಡಂಬಿ ಸೇವಿಸಬೇಕು. ಆದರೆ ಅತಿಯಾಗಿ ಇದನ್ನು ತಿಂದರೆ ಅದರಿಂದ ಕ್ಯಾಲೋರಿ ಹೆಚ್ಚಾಗಬಹುದು.

ಹಿಂದಿನ ಲೇಖನಮಂಡ್ಯ ರೈತರಿಂದ ಪೇ ಫಾರ್ಮರ್ ಅಭಿಯಾನ
ಮುಂದಿನ ಲೇಖನಪ್ರತಿ ಗರಡಿ ಮನೆ ನಿರ್ಮಾಣಕ್ಕೆ 10ಲಕ್ಷ ಅನುದಾನ: ಸಚಿವ ಡಾ.ನಾರಾಯಣಗೌಡ