ಮನೆ ರಾಜಕೀಯ ದುರ್ಗಾಷ್ಟಮಿ ಪುಣ್ಯ ದಿನದಂದು ಎಲೆಕ್ಷನ್ ಘೋಷಣೆ: ಕಾಂಗ್ರೆಸ್ ಭರವಸೆ ಜಾರಿಗೆ ತರೋಣ ಎಂದ ರಣದೀಪ್ ಸಿಂಗ್...

ದುರ್ಗಾಷ್ಟಮಿ ಪುಣ್ಯ ದಿನದಂದು ಎಲೆಕ್ಷನ್ ಘೋಷಣೆ: ಕಾಂಗ್ರೆಸ್ ಭರವಸೆ ಜಾರಿಗೆ ತರೋಣ ಎಂದ ರಣದೀಪ್ ಸಿಂಗ್ ಸುರ್ಜೇವಾಲ

0

ಬೆಂಗಳೂರು: ದುರ್ಗಾಷ್ಟಮಿ ಪುಣ್ಯ ದಿನದಂದು ಎಲೆಕ್ಷನ್ ಘೋಷಣೆಯಾಗಿದೆ ಕಾಂಗ್ರೆಸ್‌ ಭರವಸೆಗಳನ್ನು ಜಾರಿಗೆ ತರೋಣ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೆ ಟ್ವೀಟ್ ಮಾಡಿರುವ,  ದುರ್ಗಾಷ್ಟಮಿಯ ಪುಣ್ಯ ದಿನದಂದು ECI ಕರ್ನಾಟಕ ಚುನಾವಣೆಯನ್ನು ಘೋಷಿಸಿದೆ. 40 ಪರ್ಸೆಂಟ್ ಸರ್ಕಾರ ಮತ್ತು ಅದರ ಲಜ್ಜೆಗೆಟ್ಟ ಲೂಟಿಯಿಂದ ರಾಜ್ಯವನ್ನು ಮುಕ್ತಗೊಳಿಸಲು ಕಾಂಗ್ರೆಸ್ ಸಂಕಲ್ಪ ಮಾಡಿದೆ. ಬ್ರ್ಯಾಂಡ್ ಕರ್ನಾಟಕ ಪುನರ್ ನಿರ್ಮಾಣ ಮಾಡೋಣ. ಕನ್ನಡಿಗರ ಅಭಿಮಾನ ಬೆಳೆಯಲಿ. ಕಾಂಗ್ರೆಸ್‌ ಭರವಸೆಗಳನ್ನು ಜಾರಿಗೆ ತರೋಣ. ಕರ್ನಾಟಕ ಗೆಲ್ಲಲಿ  ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಂದೇ ಹಂತದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ಹಿಂದಿನ ಲೇಖನಪಿಎಸ್ ಐ ಹಗರಣ: ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಜಾಮೀನು ಮನವಿಯನ್ನು ಮೂರನೇ ಬಾರಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ
ಮುಂದಿನ ಲೇಖನವಿಕಲಚೇತನರಿಗೆ ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ