ಗಜೇಂದ್ರಗಡ ಕೋಟೆ ಪ್ರಸಿದ್ಧ ಮರಾಠಾ ಆಡಳಿತಗಾರ ಛತ್ರಪತಿ ಶಿವಾಜಿ ಮಹಾರಾಜ್ ನಿರ್ಮಿಸಿದ ಐತಿಹಾಸಿಕ ಕೋಟೆ. ಮೇಲಿನಿಂದ ನೋಡಿದಾಗ ಆನೆಯ ಆಕಾರವನ್ನು ಹೋಲುತ್ತದೆ ಎಂಬ ಕಾರಣಕ್ಕೆ ಗಜೇಂದ್ರಗಡ ಎಂಬ ಹೆಸರು ಬಂದಿದೆ.
ಗಜೇಂದ್ರಗಡ ಒಪ್ಪಂದ: ಮೈಸೂರು ದೊರೆ ಟಿಪ್ಪು ಸುಲ್ತಾನ್ 1876 ರಲ್ಲಿ ಗಜೇಂದ್ರಗಡನ್ನು ಮರಾಠರು ಮತ್ತು ನಿಜಾರಿಗೆ ಕಳೆದುಕೊಂಡನು. ಗಜೇಂದ್ರಗಡ ಒಪ್ಪಂದದ ಭಾಗವಾಗಿ ಬಾದಾಮಿ ಮತ್ತು ಗಜೇಂದ್ರಗಡವನ್ನು ಮರಾಠರಿಗೆ ಒಪ್ಪಿಸಲಾಯಿತು.
ಗಜೇಂದ್ರಗಡ ಕೋಟೆಯ ಮುಖ್ಯಾಂಶಗಳು
ಐದು ತಲೆಯ ಹಾವು ಮತ್ತು ಎರಡು ಸಿಂಹಗಳು ಪರಸ್ಪರ ಎದುರಾಗಿರುವ ಕಲಾಕೃತಿಗಳೊಂದಿಗೆ ವೈಭವವಾದ ಕೋಟೆ ಪ್ರವೇಶದ್ವಾರ
ಭಗವಾನ್ ಹನುಮಾನ್ ವಿಗ್ರಹ
ಹಿಂದಿ ಮತ್ತು ಮರಾಠಿ ಶಾಸನಗಳು
ನೀರಿನ ತೊಟ್ಟಿ
ಆನೆಯ ಮುಖದ ಕೆತ್ತನೆಗಳು
ವಿಹಂಗಮ ನೋಟ: ಕೋಟೆಯ ಮೇಲಿನಿಂದ ಕೆಳಗಿನ ಹಳ್ಳಿಯ ನೋಟ ಮತ್ತು ದೂರದಲ್ಲಿರುವ ವಿಂಡ್ಮಿಲ್ಗಳು ನಯನ ಮನೋಹರವಾಗಿ ಕಾಣಿಸುತ್ತವೆ.
ಪೂಜಾ ಸ್ಥಳಗಳು- ಮಸೀದಿ ಮತ್ತು ಕಾಲಕಾಲೇಶ್ವರ ದೇವಸ್ಥಾನ
ಬಂಕರ್ ಗಳು ಮತ್ತು ಗೋದಾಮುಗಳು
ಅವಶೇಷಗಳು
ಹತ್ತಿರದಲ್ಲಿ: ಸೂಡಿ (11 ಕಿ.ಮೀ), ಬಾದಾಮಿ (44 ಕಿ.ಮೀ), ಐಹೊಳೆ ಮತ್ತು ಪಟ್ಟದಕಲ್ಲು (40 ಕಿ.ಮೀ), ಆಲಮಟ್ಟಿ ಅಣೆಕಟ್ಟು (82 ಕಿ.ಮೀ), ಟಿಬಿ ಅಣೆಕಟ್ಟು (86 ಕಿ.ಮೀ), ಆನೆಗುಂಡಿ (90 ಕಿ.ಮೀ) ಇತ್ಯಾದಿ ಗಜೇಂದ್ರಗಡ ಕೋಟೆಯೊಂದಿಗೆ ಭೇಟಿ ನೀಡಬಹುದಾದ ಹತ್ತಿರದ ಸ್ಥಳಗಳು.
ತಲುಪುವುದು ಹೇಗೆ?
ಗಜೇಂದ್ರಗಡ ಬೆಂಗಳೂರಿನಿಂದ 413 ಕಿ.ಮೀ ಮತ್ತು ಹತ್ತಿರದ ವಿಮಾನ ನಿಲ್ದಾಣವಾದ ಹುಬ್ಬಳ್ಳಿಯಿಂದ 166 ಕಿ.ಮೀ ದೂರದಲ್ಲಿದೆ. ಗದಗ ಜಂಕ್ಷನ್ (54 ಕಿ.ಮೀ) ಹತ್ತಿರದ ರೈಲು ನಿಲ್ದಾಣವಾಗಿದೆ. ಗದಗ ತಲುಪಲು ಬಸ್ಸುಗಳು ಮತ್ತು ರೈಲುಗಳು ಲಭ್ಯವಿದೆ. ಗಜೇಂದ್ರಗಡ ಕೋಟೆ ತಲುಪಲು ಗದಗ ನಗರದಿಂದ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.
ವಸತಿ : ಗಜೇಂದ್ರಗಡ ನಗರದಲ್ಲಿ ಸೀಮಿತ ಸಂಖ್ಯೆಯ ಹೋಟೆಲ್ ಗಳಿವೆ. 54 ಕಿ.ಮೀ ದೂರದಲ್ಲಿರುವ ಗದಗ ನಗರದಲ್ಲಿ ಹೆಚ್ಚಿನ ಆಯ್ಕೆಗಳಿವೆ.
ಕೆ ಸುಧಾಕರ್ ಗೆ ಗಂಡಾಂತರ.
ಕಾಂಗ್ರೆಸ್ ಕಾರ್ಯಕರ್ತರಿಗೆ ಐಟಿ ಕಿರುಕುಳ
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ದ್ವಂಸ
ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ……
'ಕೈ' ಪರ ಪ್ರಚಾರದಲ್ಲಿದ್ದಾಗ ತಡೆದ ಬಿಜೆಪಿ ಕಾರ್ಯಕರ್ತರು….
ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ರಾಪಿಡೋ ವತಿಯಿಂದ ಸಿಹಿ ಸುದ್ದಿ
ಏಪ್ರಿಲ್ 26ಕ್ಕೆ ಏನೆಲ್ಲ ಲಭ್ಯವಿರುತ್ತದೆ….
ಲಂಡನ್ನಲ್ಲಿ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ.
ಲೋಕಸಭಾ ಚುನಾವಣೆಗೆ ಬೆಂಗಳೂರಿನಲ್ಲಿ ನಿಷೇಧಾಗ್ನೆ ಜಾರಿ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.