ಮನೆ ಅಪರಾಧ ಎನ್ ಐ ಎ ತನಿಖೆಗೆ ಹರ್ಷ ಕೊಲೆ ಪ್ರಕರಣ ವರ್ಗ

ಎನ್ ಐ ಎ ತನಿಖೆಗೆ ಹರ್ಷ ಕೊಲೆ ಪ್ರಕರಣ ವರ್ಗ

0

ಶಿವಮೊಗ್ಗ,:  ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ರಾಜ್ಯ ಗೃಹ ಇಲಾಖೆ ಎನ್ ಐಎ ತನಿಖೆಗೆ ವರ್ಗಾವಣೆ ಮಾಡಿರುವ ಮಾಹಿತಿ ಲಭ್ಯವಾಗಿದೆ.

ಫೆಬ್ರವರಿ 20ರಂದು  ಭಜರಂಗದಳದ ಕಾರ್ಯಕರ್ತ ಹರ್ಷ ರಾತ್ರಿ ವೇಳೆ ಶಿವಮೊಗ್ಗ ನಗರದ ಸಿಗೇಹಟ್ಟಿ ಬಡಾವಣೆ ಮನೆಯಿಂದ ಭಾರತಿ ಕಾಲೋನಿಗೆ ಸ್ನೇಹಿತರ ಜತೆ ತೆರಳಿದ್ದ. ಈ ವೇಳೆ ನಾಲ್ಕು ಮಂದಿ ಸ್ವಿಫ್ಟ್ ಕಾರಿನಲ್ಲಿ  ಬಂದು ಹರ್ಷನ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು.

ಈ ಪ್ರಕರಣ ರಾಜ್ಯಾದ್ಯಂತ ಘರ್ಷಣೆಯಾಗಿ ಶಿವಮೊಗ್ಗದಲ್ಲಿ ಗಲಾಟೆ ನಡೆದಿತ್ತು. ಪ್ರಕರಣ ಸಂಬಂಧ ಹತ್ಯೆಗೈದ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿ ಜೈಲಿಗಟ್ಟಿದ್ದಾರೆ. ಈ ನಡುವೆ ಪ್ರಕರಣವನ್ನು ಎನ್ ಐಎ ತನಿಖೆಗೆ ವಹಿಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದರು.

ಇದೀಗ ಗೃಹ ಇಲಾಖೆ ಪ್ರಕರಣವನ್ನು ಎನ್ ಐಎಗೆ ವರ್ಗಾಯಿಸಿದ್ದು, ಕೆಲವೇ ದಿನಗಳಲ್ಲಿ ಎನ್ ಐಎ ಟೀಂ ಶಿವಮೊಗ್ಗಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ಹಿಂದಿನ ಲೇಖನಮುಡಾ ಆಯುಕ್ತ ಸ್ಥಾನದ ಹಗ್ಗ ಜಗ್ಗಾಟಕ್ಕೆ ಬ್ರೇಕ್
ಮುಂದಿನ ಲೇಖನರಾಮ್‌ಪುರಹತ್ ಹತ್ಯಾಕಾಂಡ: ಇಂದು ಕೋಲ್ಕತ್ತಾ ಹೈಕೋರ್ಟ್ ನಲ್ಲಿ ವಿಚಾರಣೆ