ಮನೆ ಅಪರಾಧ ಹರ್ಷ ಕೊಲೆ ಪ್ರಕರಣ:  ಶಿವಮೊಗ್ಗಕ್ಕೆ ಎನ್​​ಐಎ ಭೇಟಿ, ತನಿಖೆ

ಹರ್ಷ ಕೊಲೆ ಪ್ರಕರಣ:  ಶಿವಮೊಗ್ಗಕ್ಕೆ ಎನ್​​ಐಎ ಭೇಟಿ, ತನಿಖೆ

0

ಶಿವಮೊಗ್ಗ(Shivamogga): ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ತಂಡ(ಎನ್​ಐಎ)ದ ಹಿರಿಯ ಅಧಿಕಾರಿಗಳು ಶಿವಮೊಗ್ಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಒಟ್ಟು 8 ವಾಹನಗಳಲ್ಲಿ ಬುಧವಾರ ಸಂಜೆ ಹೊತ್ತಿಗೆ ಶಿವಮೊಗ್ಗ ನಗರಕ್ಕೆ ರಾಷ್ಟ್ರೀಯ ತನಿಖಾ ದಳದ ಹಿರಿಯ ಅಧಿಕಾರಿಗಳು ಭೇಟಿ ‌ನೀಡಿದ್ದಾರೆ.

 ಇಂದು ಪ್ರಕರಣದ ಆರೋಪಿಗಳ ಮನೆ ಸೇರಿದಂತೆ ಒಟ್ಟು 18 ಕಡೆಗಳಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಕೆಲವೆಡೆ ಭೇಟಿ ನೀಡಲಾಗಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ತಂಡದಲ್ಲಿ ಕೇರಳ, ಆಂಧ್ರ ಪ್ರದೇಶ, ತಮಿಳುನಾಡಿನ ಹಿರಿಯ ಅಧಿಕಾರಿಗಳು ಇದ್ದಾರೆ. ಹರ್ಷ ಹತ್ಯೆಯಲ್ಲಿ ವಿವಿಧ ಸಂಘಟನೆಗಳ ಕೈವಾಡ ಇದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆಯನ್ನು ಎನ್ಐಎಗೆ ಸರ್ಕಾರ ವಹಿಸಿದೆ.

ಹಿಂದಿನ ಲೇಖನಆಗಸ್ಟ್ ನಲ್ಲಿ ಜಿಎಸ್ ಟಿ ಪರಿಹಾರದ ಬಗ್ಗೆ ಅಂತಿಮ ನಿರ್ಣಯ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಮತವೇ ಇಲ್ಲದವರು ಬಹುಮತ ಗಳಿಸಲು ಹೇಗೆ ಸಾಧ್ಯ ?: ಬಿಜೆಪಿ