ಮನೆ ಅಪರಾಧ ಹುಣಸೂರು: ಮೂರು ಕಡೆ ಸರಗಳ್ಳತನ

ಹುಣಸೂರು: ಮೂರು ಕಡೆ ಸರಗಳ್ಳತನ

0

ಹುಣಸೂರು: ತಾಲೂಕಿನ ಮೂರು ಕಡೆ ಸರಣಿ ಸರಕಳ್ಳತನ ನಡೆದಿದ್ದು, ಜನರು ಆತಂಕಗೊಂಡಿದ್ದಾರೆ.

Join Our Whatsapp Group

ತಾಲೂಕಿನ ಮೋದೂರಿನ ವೃದ್ದೆ ಶಿವಮ್ಮ(70), ಅರಸು ಕಲ್ಲಹಳ್ಳಿಯ ವೃದ್ದೆ ಪುಟ್ಟಮ್ಮ(68) ಹಾಗೂ ವಡೇರಹೊಸಹಳ್ಳಿಯ ಅಂಬುಜಾ(25) ಒಡವೆಗಳನ್ನು ಕಳೆದುಕೊಂಡವರು.

ಬೈಕಿನಲ್ಲಿ ಬಂದ ಸುಮಾರು 25-30 ವರ್ಷದ ಅಪರಿಚಿತ ವ್ಯಕ್ತಿಯೊರ್ವ ಎಲ್ಲೆಡೆ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರನ್ನು ಹತ್ತಿರ ಕರೆದು, ಹತ್ತಿರ ಬರುತ್ತಿದ್ದಂತೆ ಹೆದರಿ ಓಡುತ್ತಿದ್ದ ಇಬ್ಬರು ವೃದ್ದೆಯರಿಗೆ ಕಣ್ಣಿಗೆ ಖಾರದಪುಡಿ ಎರಚಿ ಕುತ್ತಿಗೆಯಲ್ಲಿದ್ದ ಸರ ಕಿತ್ತುಕೊಂಡಿ ಘಟನೆ ನಡೆದಿದೆ.

ಪುಟ್ಟಮ್ಮರ ಕಿವಿಯಲ್ಲಿದ್ದ ,ಓಲೆಯನ್ನು ಕಿತ್ತು ಪರಾರಿಯಾಗಿದ್ದಾನೆ. ಪುಟ್ಟಮ್ಮ ಅವರ ಕಿವಿಗೆ ಗಾಯವಾಗಿದ್ದು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಡೆಯರ ಹೊಸಹಳ್ಳಿಯ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಂಬುಜಾ ಅವರ ಬಳಿ ಬಂದು ಸ್ವಾಮಿಗೌಡರ ಜಮೀನು ಯಾವುದೆಂದು ಕೇಳಿ ಹತ್ತಿರ ಬರುತ್ತಿದ್ದಂತೆ ಹೆದರಿದ ಅಂಬುಜಾ ಓಡಿ ಹೋದರೂ ಬೆನ್ನಟ್ಟಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕೀಳಲು ನಡೆಸಿದ ಪ್ರಯತ್ನ ವಿಫಲವಾಗಿ ತಾಳಿ, ಗುಂಡು ಮಾತ್ರ ಕೀಳಲು ಸಫಲನಾಗಿದ್ದಾನೆ.

ಈಕೆಯ ಕೂಗಾಟ ಕೇಳಿ ಪಕ್ಕದ ಜಮೀನಿನಲ್ಲಿದ್ದ ರೈತರೊಬ್ಬರು ಓಡಿ ಬರುವಷ್ಟರಲ್ಲಾಗಲೇ ಆತ ಬೈಕ್ ಏರಿ ಪರಾರಿಯಾಗಿದ್ದಾನೆ.

ಮೋದೂರು, ಕೊತ್ತೆಗಾಲ ಪ್ರಕರಣಕ್ಕೆ ಸಂಬಂಧಿಸಿದಂತೆ  ಗ್ರಾಮಾಂತರ ಠಾಣೆ ಹಾಗೂ ವಡೆಯರಹೊಸಹಳ್ಳಿಯ ಪ್ರಕರಣ ಬಿಳಿಕೆರೆ ಠಾಣೆಯಲ್ಲೂ ದಾಖಲಾಗಿದ್ದು, ಸ್ಥಳಕ್ಕೆ ಇನ್ಸ್  ಪೆಕ್ಟರ್‌ ಗಳಾದ ಸಿ.ವಿ.ರವಿ ಹಾಗೂ ಲೋಲಾಕ್ಷಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹಿಂದಿನ ಲೇಖನಮದ್ದೂರು ತಾಲ್ಲೂಕಿನಲ್ಲಿ ಆನೆಗಳು ಪ್ರತ್ಯಕ್ಷ: ಬೆಳೆ ನಾಶ
ಮುಂದಿನ ಲೇಖನಮಂಗಳೂರು: ಸರಣಿ ಅಪಘಾತ, ಇಬ್ಬರಿಗೆ ಗಾಯ