ಮನೆ ಅಪರಾಧ ಪತ್ನಿಯ ಸಾವಿನಿಂದ ನೊಂದ ಪತಿ ಸಾವು: ಅನಾಥರಾದ ಮಕ್ಕಳು

ಪತ್ನಿಯ ಸಾವಿನಿಂದ ನೊಂದ ಪತಿ ಸಾವು: ಅನಾಥರಾದ ಮಕ್ಕಳು

0

ಮೈಸೂರು: ಎರಡು ತಿಂಗಳ ಹಿಂದೆ ಮೃತಪಟ್ಟ ಪತ್ನಿಯ ಸಾವಿನ ದುಃಖ ತಡೆದುಕೊಳ್ಳಲಾಗದೇ ಪತಿ ಮಹೇಶ್ (45) ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಬ್ಬರ ಮಕ್ಕಳು ಇದೀಗ ಅನಾಥರಾಗಿದ್ದಾರೆ.

ತಾಲ್ಲೂಕಿನ ಹಂಚ್ಯಾ ಗ್ರಾಮದ ಮಹೇಶ್‌ ಅವರ ಪತ್ನಿ ಗಾಯತ್ರಿ ರಕ್ತದೊತ್ತಡಕ್ಕೆ ಬಳಸುವ ಮಾತ್ರೆಗೆ ಬದಲಾಗಿ ಬೇರೆ ಮಾತ್ರೆ ಸೇವಿಸಿ ಮೃತಪಟ್ಟಿದ್ದರು.

ಹತ್ತು ವರ್ಷಗಳಿಂದ ಒಟ್ಟಿಗೆ ಇದ್ದ ಇವರ ಸಾವಿನ ದುಃಖವನ್ನು ಸಹಿಸಲಾಗದೇ ಮಹೇಶ್ ಅವರು ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಭಾನುವಾರ ಅವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ನಡೆಸಿದ್ದ ಆತ್ಮಹತ್ಯೆ ಪ್ರಯತ್ನವನ್ನು ಸ್ಥಳೀಯರು ತಡೆದಿದ್ದರು. ಅವರ ಮನವೊಲಿಸಲು ಯತ್ನಿಸಿದ್ದರು. ಆದರೆ, ಮಹೇಶ್ ಯಾವಾಗಲೂ ಪತ್ನಿಯ ಗುಂಗಿನಲ್ಲೇ ದಿನದೂಡುತ್ತಿದ್ದರು. ಭಾನುವಾರ ಸೋದರನಿಗೆ ಕರೆ ಮಾಡಿದ ಅವರು ತನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಮನವಿ ಮಾಡಿ ಕ್ರಿಮಿನಾಶಕ ಸೇವಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಪ್ಪ-ಅಮ್ಮನನ್ನು ಕಳೆದುಕೊಂಡಿರುವ 8 ವರ್ಷದ ಹೆಣ್ಣುಮಗು ಹಾಗೂ 6 ವರ್ಷದ ಗಂಡು ಮಗುವಿನ ಸ್ಥಿತಿ ನೋಡಿದ ಸ್ಥಳೀಯರ ರೋದನ ಮುಗಿಲುಮುಟ್ಟಿತ್ತು. ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಈಜಲು ಹೋಗಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವು
ಮುಂದಿನ ಲೇಖನಕುಡಿದ ಮತ್ತಿನಲ್ಲಿ ಅಪಘಾತ: ಇಬ್ಬರು ಪೊಲೀಸರು ಅಮಾನತು