ಮನೆ ರಾಜಕೀಯ ರಸ್ತೆಗುಂಡಿ ಮುಚ್ಚಿಸಲು ಸೂಚಿಸಿದ್ದೇನೆ : ಸಿಎಂ ಬೊಮ್ಮಾಯಿ

ರಸ್ತೆಗುಂಡಿ ಮುಚ್ಚಿಸಲು ಸೂಚಿಸಿದ್ದೇನೆ : ಸಿಎಂ ಬೊಮ್ಮಾಯಿ

0

ಯಾದಗಿರಿ(Yadagiri):  ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ತನಿಖೆಗೆ ಸೂಚನೆ ನೀಡಲಾಗಿದೆ. ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಸ್ತೆಗುಂಡಿಗಳ  ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಗೆ ಯಾದಗಿರಿಯಲ್ಲಿ ಪ್ರತಿಕ್ರಿಯಿಸಿದ ಅವರು,  ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ರಸ್ತೆಯಲ್ಲಿ ಗುಂಡಿಗಳಿದ್ದವು.  ಹೀಗಾಗಿ ಹೆಚ್.ಡಿಕೆ  ಆರೋಪದಲ್ಲಿ ಯಾವುದೇ ಹುರುಳಿಲ್ಲ. ಎಂದರು.

ಕಾಂಗ್ರೆಸ್ ನವರು ಬರೀ ಮಾತಾಡ್ತಾರೆ. ನಾವು ಕೆಲಸ ಮಾಡಿ ತೋರಿಸುತ್ತೇವೆ . ಕಾಂಗ್ರೆಸ್  ಅವಧಿಯಲ್ಲಿ ಆಗಿರುವ ಎಲ್ಲಾ ಹಗರಣಗಳ ಬಗ್ಗೆ ತನಿಖೆ ಮಾಡುತ್ತೇವೆ. ಶಿಕ್ಷಕರ ನೇಮಕಾತಿ ತನಿಖೆ ನಡೆಯುತ್ತಿದೆ.  ನಾವು ರಾಜ್ಯದ ಎಲ್ಲಾ ಕಡೆ ಜನಸಂಕಲ್ಪಯಾತ್ರೆ ಮಾಡುತ್ತಿದ್ಧೇವೆ. ಈ ಜನಸಂಕಲ್ಪಯಾತ್ರೆ ವಿಜಯಯಾತ್ರೆಯಾಗಿ ಬದಲಾಗಲಿದೆ ಎಂದರು.

ಹಿಂದಿನ ಲೇಖನಎಐಸಿಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ
ಮುಂದಿನ ಲೇಖನಬೆಂಗಳೂರು-ಮುಂಬೈ ಎಕ್ಸ್’ಪ್ರೆಸ್ ವೇ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ: ನಿತಿನ್ ಗಡ್ಕರಿ