ಮಂತ್ರಿಗಳನ್ನು ಭೇಟಿ ಮಾಡಿದ ಗುಂಡ
ಗುಂಡ : ನಾನು ಮಂತ್ರಿಗಳನ್ನ ಹತ್ತಿರದಿಂದ ಮಾತನಾಡಿಸಿದೆ.
ಹನುಮ : ಹೌದ, ಆಮೇಲೆ ಏನಾಯ್ತು.
ಗುಂಡ : ನನ್ನ ಸಮಸ್ಯೆ,ನಮ್ಮಊರಿನ ಸಮಸ್ಯೆ ಹೇಳಿಕೊಂಡೆ, ಅವರು ಅಲ್ಲೇ ತಕ್ಷಣ ಎಲ್ಲಾ ಸಮಸ್ಯೆ ತೀರಿಸೋಕೆ ಅಧಿಕಾರಿಗಳಿಗೆ ಸೂಚಿಸಿದ್ರು, ಏನೇನು ಸೌಲಭ್ಯ ಬೇಕೋ ಅಲ್ಲೇ ಕೂತಲ್ಲೇ ಜಾರಿಮಾಡಿದ್ರು.
ಹನುಮ : ಭೇಷ್ , ಸೂಪರ್ ಕಣೋ ನೀನು, ಆಮೇಲೆ ಏನಾಯ್ತು….
ಗುಂಡ : ಏನ್ ಡ್ಲಿ,ಅಷ್ಟೊತ್ತಿಗೆ ನಿದ್ದೆಯಿಂದ ಎಚ್ಚರ ಆಯ್ತು, ಕನಸು ಅರ್ಧಕ್ಕೆ ನಿಂತೋಯ್ತು…
******
ಕನ್ನಡದ ಕೋಟ್ಯಾಧಿಪತಿ
ಕನ್ನಡದ ಕೋಟ್ಯಾಧಿಪತಿಯಲ್ಲಿ ಪ್ರಶ್ನೆಗೆ ಉತ್ತರ ಕೊಟ್ಟು ಆಮೇಲೆ ಕೋಟಿ ಸಂಪಾದನೆ ಮಾಡ್ತೀವಿ.
ರಾಜಕಾರಣಿಗಳು ಮೊದಲು ಕೋಟಿ ಸಂಪಾದನೆ ಮಾಡಿ ಆಮೇಲೆ ಉತ್ತರ ಕೊಡ್ತಾರೆ.
******
ಫೇಸ್ ಬುಕ್ ಪೋಸ್ಟ್ ತಂದೆ ಮಗನಿಗೆ ಫೇಸ್ ಬುಕ್ ನಲ್ಲಿ ಮೆಸೇಜ್ ಮಾಡ್ತಾರೆ,
” ಮಗನೆ, ಟೈಮ್ 10 ಘಂಟೆ ಆಯ್ತು ಇವತ್ತಾದ್ರು ಕಂಪ್ಯೂಟರ್ ಆಪ್ ಮಾಡಿ, ರೂಮಿಂದ ಹೊರಗೆ ಬಾ , ಒಟ್ಟಿಗೆ ಊಟ ಮಾಡೋಣ, ನಿನ್ನ ನೋಡಿ 3 ದಿನ ಆಯ್ತು. ( ಮಗನಿಗೆ ಮೆಸೇಜ್ ನೋಡಿ, ಬೇಸರ ಆಯ್ತು ).
ಮಗ ಆ ಮೆಸೇಜ್ ಗೆ ಒಂದು ಲೈಕ್ ಕೊಟ್ಟು , ಬ್ರೌಸಿಂಗ್ ಮುಂದು ವರಿಸಿದ.
******
ಮುದುಕಿಗೆ ಬದುಕುವ ಆಸೆ ಎಪ್ಪತ್ತು ವರ್ಷದ ಮುದುಕಿ, ದೇವರನ್ನು ಪ್ರಾರ್ಥಿಸುತ್ತಾಳೆ. ಮುದುಕಿಯ ಪ್ರಾರ್ಥನೆ ಕೇಳಿದ ದೇವರು ಪ್ರತ್ಯಕ್ಷವಾಗಿ, ಏನು ವಾರ ಬೇಕೆಂದು ಕೇಳುತ್ತಾನೆ.
ಮುದುಕಿ, ” ದೇವರೇ ನನ್ನನ್ನು, ಇನ್ನೂ ಹೆಚ್ಚು ದಿನಗಳು ಬದುಕುವಂತೆ ಮಾಡು ಎಂಬ ವರ ಕೇಳುತ್ತಾಳೆ. ಅದಕ್ಕೆ ದೇವರು ತಥಾಸ್ತು , ನೀನಿನ್ನೂ 30 ವರ್ಷಗಳು ಬದುಕು ಎಂದು ವಾರ ನೀಡಿ ಅದೃಶ್ಯನಾಗುತ್ತಾನೆ.
ವರ ಸಿಕ್ಕಿದ ದಿನದಿಂದ ಮುದುಕಿ ಬೀಗಿ ಹೋಗುತ್ತಾಳೆ, ದಿನವೂ ಮೇಕಪ್ ಮಾಡಿಕೊಂಡು ಅಡ್ಡಾಡಲು ಶುರುಮಾಡುತ್ತಾಳೆ, ಆದರೆ ಒಂದೇ ತಿಂಗಳಿಗೆ ಸಾವನ್ನಪ್ಪುತ್ತಾಳೆ.
ಸತ್ತ ಮುದುಕಿ ಸ್ವರ್ಗದಲ್ಲಿ ಕೋಪದಿಂದ ದೇವರನ್ನು ಕೇಳುತ್ತಾಳೆ, ದೇವರೇ ನಾನಿನ್ನು ಬದುಕುತ್ತೇನೆ ಎಂದು ವರ ನೀಡಿ, ಈಗ ನಾನು ಸಾಯುವಂತೆ ಮಾಡಿದ್ದಿಯ ” ಎನ್ನುತ್ತಾಳೆ.
ಅದಕ್ಕೆ ದೇವರು ” ತಾಯಿ , ನಿನ್ನ ಅತಿಯಾದ ಮೇಕಪ್ ನಿಂದ ನಿನ್ನ ಗುರುತು ನಮಗೆ ಸಿಗಲಿಲ್ಲ” ಎನ್ನುತ್ತಾನೆ.
*****
ಡಾಕ್ಟರ್ ಮತ್ತು ರೋಗಿ
ಡಾಕ್ಟರ್ : ಸಿಕ್ಸ್ಟಿ, ನೈನ್ಟಿ ಅಂತ ಕುಡಿತಾ ಇದ್ರೆ , ಪ್ರತಿ ಪೆಗ್ ಕುಡಿದಾಗು ನಿನ್ನ ಆಯಸ್ಸು 5 ನಿಮಿಷ ಕಡಿಮೆ ಆಗುತ್ತದೆ.
ರೋಗಿ : ಅದಕ್ಕೆ ಡಾಕ್ಟ್ರೇ,ನಾನು ಪ್ರತಿಪೆಗ್ ಆದ ಮೇಲೆ ಐದೈದು ನಿಮಿಷ ನಗ್ತಾ ಇರ್ತೀನಿ ….
*****
ಗಂಡ ಹೆಂಡತಿ ಕೆಲವೊಬ್ಬರು ಜಾತಿ, ಮತ ಎಂದು ಜಗಳ ಮಾಡುತ್ತಾರೆ.
ಇನ್ನೂ ಕೆಲವೊಬ್ಬರು ದುಡ್ಡಿಗಾಗಿ ಜಗಳ ಮಾಡ್ತಾರೆ, ಮಿಕ್ಕವರು ಖುರ್ಚಿಗಾಗಿ. ಆದರೆ ಗಂಡ ಹೆಂಡತಿ ಇಬ್ಬರೇ ಯಾವುದೇ ಕಾರಣ ಇಲ್ಲದೆ ನಿಸ್ವಾರ್ಥವಾಗಿ ಜಗಳ ಮಾಡ್ತಾರೆ.
ಶಾಲೆಗೆ ಕುಡಿದು ಬರುತ್ತಿದ್ದ ಶಿಕ್ಷಕ ; ಚಪ್ಪಲಿ – ಶೂ ಎಸೆದು ಓಡಿಸಿದ ವಿದ್ಯಾರ್ಥಿಗಳು
ಮತದಾರರಿಗೆ ' ಸಿಹಿ ', ಸುದ್ದಿ..
ಮೋದಿ ಅಭಿಮಾನಿಯ ಕೋರಿಕೆ…
ಪ್ರಸ್ತುತ ಪೊಲೀಸ್ ವ್ಯವಸ್ಥೆಯನ್ನು ಅಣುಕಿಸುತ್ತಿರುವ ಕಾಲ್ಪನಿಕ ಸನ್ನಿವೇಶಗಳು..
ಅಭಿಮಾನಿ ದೇವರುಗಳ ಜೊತೆ ಜಾಕಿ ಚಲನಚಿತ್ರ ವೀಕ್ಷಿಸಿದ ಅಶ್ವಿನಿ ಪುನೀತ್
ಮೈಸೂರು ಮೆಡಿಕಲ್ ಕಾಲೇಜು ಮತ್ತು ಕೆ ಆರ್ ಆಸ್ಪತ್ರೆಯ ಕರ್ಮಕಾಂಡ
ಕರ್ನಾಟಕದ ಹೆಮ್ಮೆಯ ರತ್ನ ಶ್ರೀಮತಿ ಸುಧಾಮೂರ್ತಿಯವರು ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.