ಮನೆ ರಾಜಕೀಯ ಸಚಿವ ಸಂಪುಟ ವಿಸ್ತರಣೆ ವಿಚಾರ: ಕಿರಿಯರಿಗೆ ಅವಕಾಶ ನೀಡಲಿ ಎಂದ ಸಚಿವ ಉಮೇಶ್ ಕತ್ತಿ

ಸಚಿವ ಸಂಪುಟ ವಿಸ್ತರಣೆ ವಿಚಾರ: ಕಿರಿಯರಿಗೆ ಅವಕಾಶ ನೀಡಲಿ ಎಂದ ಸಚಿವ ಉಮೇಶ್ ಕತ್ತಿ

0

ಚಾಮರಾಜನಗರ(Chamarajnagara): ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಹೈಕಮಾಂಡ್ ಗೆ ಬಿಟ್ಟ ವಿಚಾರ. ಹಿರಿಯರಿಗೆ ಕೊಕ್ ಕೊಟ್ಟು, ಕಿರಿಯರಿಗೆ ಅವಕಾಶ ನೀಡಲಿ ಎಂದು ಆಹಾರ ಸಚಿವ ಉಮೇಶ್ ಕತ್ತಿ(Umesh katti) ತಿಳಿಸಿದ್ದಾರೆ.

ಚಾಮರಾಜನಗರ ಬಂಡೀಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಉಮೇಶ್ ಕತ್ತಿ, ರಾಜ್ಯದಲ್ಲಿ ಇನ್ನೂ ಒಂದು ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ. ಸರ್ಕಾರ ನಡೆಸುವಾಗ ಹೆಚ್ಚು ಕಡಿಮೆಯಾಗುವುದು ಸಹಜ. ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.  ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಟ್ಟರೂ ಸ್ವಾಗತಿಸುತ್ತೇವೆ. ಪಕ್ಷ ಮತ್ತೆ ಅಧಿಕಾರಕ್ಕೆ ತರಬೇಕು. ಹೀಗಾಗಿ ಹಿರಿಯರನ್ನು ಕೈಬಿಟ್ಟು ಯುವಕರಿಗೆ ಅವಕಾಶ ನೀಡಲಿ ಎಂದರು.

ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಸ್ವಾಗತ. ನಾನು 10 ಚುನಾವಣೆಯಲ್ಲಿ ಸ್ಪರ್ಧಿಸಿ 9 ಬಾರಿ ಗೆಲುವು ಸಾಧಿಸಿದ್ದೇನೆ  ನನ್ನನ್ನು ಸಂಪುಟದಿಂದ ಕೈಬಿಟ್ಟು ಪಕ್ಷದ ಕೆಲಸ ಕೊಟ್ಟರೂ ಓಕೆ. ಅಂತೆಯೇ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಕೊಟ್ಟರೆ ಪಕ್ಷಕ್ಕೆ ಇನ್ನಷ್ಟು ಬಲ ಬರುತ್ತದೆ ಎಂದು  ಹೇಳಿದರು.

ಹಿಂದಿನ ಲೇಖನ“ತನುಜಾ” ಸಿನಿಮಾ ಅಖಾಡಕ್ಕೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ ಸುಧಾಕರ್ ಎಂಟ್ರಿ .!
ಮುಂದಿನ ಲೇಖನಮೈಸೂರು ವಿವಿ ಕುಲಪತಿಗೆ ಕರ್ನಲ್ ಕಮಾಂಡೆಂಟ್ ಗೌರವ