ಮನೆ ಸ್ಥಳೀಯ ಮೈಸೂರು: ಹುಲಿ ದಾಳಿಗೆ ಮಹಿಳೆ ಬಲಿ

ಮೈಸೂರು: ಹುಲಿ ದಾಳಿಗೆ ಮಹಿಳೆ ಬಲಿ

0

ಮೈಸೂರು: ಹುಲಿ ದಾಳಿಗೆ ಮಹಿಳೆಯೊಬ್ಬರು ಬಲಿಯಾದ ಘಟನೆ ನಂಜನಗೂಡು ತಾಲೂಕಿನ ಬಳ್ಳೂರ್ ಹುಂಡಿ ಗ್ರಾಮದಲ್ಲಿ ನಡೆದಿದೆ.

ರತ್ನಮ್ಮ (55) ಮೃತಪಟ್ಟವರು.

ಮಧ್ಯಾಹ್ನದ ವೇಳೆ ದನ ಮೇಯಿಸಲು ಕಾಡಂಚಿಗೆ ತೆರಳಿದ್ದಾಗ ರತ್ನಮ್ಮ ಅವರ ಮೇಲೆ ಹುಲಿ ದಾಳಿ ನಡೆಸಿದೆ. ಅಲ್ಲದೆ, ರತ್ನಮ್ಮ ಅವರನ್ನು ಕೊಂದು ಎಡಭಾಗದ ದೇಹವನ್ನು ತಿಂದುಹಾಕಿ ಹೋಗಿದೆ. ಇದು ಸಹಜವಾಗಿ ಅಲ್ಲಿನ ಜನರನ್ನು ಭೀತಿಗೊಳಿಸಿದೆ. ಇನ್ನು, ಹುಲಿ ದಾಳಿಗೆ ಮಹಿಳೆ ಬಲಿಯಾದ ಹಿನ್ನೆಲೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

20 ದಿನಗಳ ಹಿಂದೆ ಜೇನುಕಟ್ಟೆ ಗ್ರಾಮದಲ್ಲಿ ಹುಲಿಯೊಂದು ಹಸುವನ್ನು ಕೊಂದು ಅದರ ಮಾಲೀಕ ಮೇಲೆ ದಾಳಿ ನಡೆಸಿತ್ತು. ಬಳಿಕ ಇದೇ ಪ್ರದೇಶದಲ್ಲಿ ಹುಲಿ ದಾಳಿಗೆ ಎತ್ತು ಬಲಿಯಾಗಿತ್ತು. ಇದೀಗ ಮಹಿಳೆಯೊಬ್ಬರು ಬಲಿಯಾಗಿದ್ದು, ಸಹಜವಾಗಿ ಕೃಷಿ ಚಟುವಟಿಕೆ, ಹಸು ಮೇಯಿಸಲು ತೆರಳಲು ಗ್ರಾಮಸ್ಥರು ಆತಂಕಪಡುತ್ತಿದ್ದಾರೆ.

ಹಿಂದಿನ ಲೇಖನಜನರ ದುಡ್ಡು ಜನರ ಜೇಬಿಗೆ ಹಾಕಿದರೆ ಬಿಜೆಪಿಯವರಿಗೆ ಹೊಟ್ಟೆಯುರಿ ಏಕೆ: ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಮುಂದಿನ ಲೇಖನ“ಕೈವ” ಸಿನಿಮಾದ ಆ್ಯಕ್ಷನ್‌ ಟೀಸರ್‌’ಗೆ ಮೆಚ್ಚುಗೆ