ಮನೆ ರಾಜ್ಯ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್‌ ಕುಮಾರ್‌ ವರ್ಗ

ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್‌ ಕುಮಾರ್‌ ವರ್ಗ

0

ಮೈಸೂರು(Mysuru):  ನಾಗರಹೊಳೆ ಹುಲಿ ಯೋಜನೆ ನಿರ್ದೇಶಕರಾಗಿದ್ದ( ಹುಣಸೂರು ವನ್ಯಜೀವಿ ವಿಭಾಗ) ಡಿ.ಮಹೇಶ್‌ಕುಮಾರ್ ಸರ್ಕಾರ ವರ್ಗಾವಣೆ ಮಾಡಿದ್ದು, ಜಂಗಲ್ ರೆಸಾರ್ಟ್ ಲಿಮಿಟೆಡ್‌ನ ನಿರ್ದೇಶಕರಾಗಿ ನಿಯೋಜಿಸಲಾಗಿದೆ.

ಅವರ ಜಾಗಕ್ಕೆ ಪ್ರಸ್ತುತ ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ತ್ರಿಪುರ ಕೇಡರ್‌ನ ಐಎಫ್‌ಎಸ್ ಅಧಿಕಾರಿ ಹರ್ಷಕುಮಾರ್ ಚಿಕ್ಕನರಗುಂದ ಅವರನ್ನು ನೇಮಿಸಲಾಗಿದೆ. ಹರ್ಷಕುಮಾರ್ ಮೂರು ವರ್ಷ ಕಾಲ ತವರು ರಾಜ್ಯ ಕರ್ನಾಟಕಕ್ಕೆ ನಿಯೋಜನೆಗೊಂಡಿದ್ದಾರೆ.

ಎರಡು ವರ್ಷದ ಹಿಂದೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕರಾಗಿ ನೇಮಕಗೊಂಡ ಮಹೇಶ್‌ಕುಮಾರ್ ಸತತ ಎರಡು ವರ್ಷವೂ ಕಾಡಿನ ಬೆಂಕಿ ನಿಯಂತ್ರಣದ ಜತೆಗೆ ಸಂರಕ್ಷಣೆಗೆ ವಿಶೇಷ ಒತ್ತು ನೀಡಿದ್ದರು. ಮಾನವ ವನ್ಯಜೀವಿ ಸಂಘರ್ಷ ತಡೆಯಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದರು.

ಹಿಂದಿನ ಲೇಖನಪತ್ನಿಯ ಶಿರಚ್ಛೇದ ಮಾಡಿ, ಆಕೆಯ ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದ ವ್ಯಕ್ತಿ 
ಮುಂದಿನ ಲೇಖನಮಳೆಗಾಲದಲ್ಲಿ ಸೊಪ್ಪು ಬಳಕೆಯನ್ನು ಕಡಿಮೆ ಮಾಡಿ