ಮನೆ ಅಪರಾಧ ನಂಜನಗೂಡು: ಕೊಲೆ ಪ್ರಕರಣ ಭೇದಿಸಿದ ಪೊಲೀಸರು, ಆರೋಪಿಯ ಬಂಧನ

ನಂಜನಗೂಡು: ಕೊಲೆ ಪ್ರಕರಣ ಭೇದಿಸಿದ ಪೊಲೀಸರು, ಆರೋಪಿಯ ಬಂಧನ

0

ನಂಜನಗೂಡು: ಕಪಿಲಾ ಸ್ನಾನ ಘಟ್ಟದ ಬಳಿ ಅರೆ ನಗ್ನ ಸ್ಥಿತಿಯಲ್ಲಿ  ಪತ್ತೆಯಾಗಿದ್ದ  ಮಹಿಳೆಯ ಶವದ ಪ್ರಕರಣವನ್ನು ಎರಡೇ ದಿನಗಳಲ್ಲಿ ನಂಜನಗೂಡು ಪಟ್ಟಣ ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

Join Our Whatsapp Group

ಕೊಲೆಯಾದವರು ಕನಕಪುರ ತಾಲ್ಲೂಕಿನ ಮಂಜುಳಾ ಎಂಬುದನ್ನು ತಿಳಿದ ಪಟ್ಟಣದ ಪೊಲೀಸರು ಆಕೆಯ ಇತಿಹಾಸವನ್ನು ಜಾಲಾಡಿದಾಗ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ.

ಕನಕಪುರದ ಮಹದೇವಾಚಾರಿಯ ಪತ್ನಿ ಮಂಜುಳಾ ಇಬ್ಬರು ಮಕ್ಕಳ ತಾಯಿಯಾಗಿದ್ದು, ಖಾಸಗಿ ಕಾರ್ಖಾನೆಯ ಶ್ಯಾಮ್‌ ಪ್ರಸಾದರೊಂದಿಗೆ ಬೆಳೆಸಿಕೊಂಡ ಪ್ರೀತಿಯೇ ಪ್ರಣಯಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿದೆ ಎನ್ನಲಾಗಿದೆ.

ಮಂಜುಳಾ, ಶ್ಯಾಮ್‌ ಪ್ರಸಾದ್ ಗೆ 3 ಲಕ್ಷ ರೂ. ಸಾಲ ಸಹ ನೀಡಿದ್ದರು ಎನ್ನಲಾಗಿದ್ದು, ಅದನ್ನು ವಾಪಸ್‌ ಕೇಳಿದ್ದಕ್ಕೆ ಕೊಡಲು ಹಣವಿಲ್ಲದ ಶ್ಯಾಮ್‌ ಅಕೆಯನ್ನು ನಂಜನಗೂಡಿಗೆ ಕರೆತಂದು ಭಯಾನಕವಾಗಿ ಕೊಲೆ ಮಾಡಿ ವಾಪಸಾಗಿದ್ದ ಎನ್ನಲಾಗಿದೆ.

ನಂಜನಗೂಡು ಠಾಣಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಹಿಂದಿನ ಲೇಖನಚೌಕಾಕಾರದ ಚಕ್ರ ಇರುವ ಸೈಕಲ್ ಬಂದಿದೆ ನೋಡಿ!
ಮುಂದಿನ ಲೇಖನ10 ಬಾರಿ ಮೌಂಟ್ ಎವರೆಸ್ಟ್ ಏರಿದ್ದ ಪರ್ವತಾರೋಹಿ ನೊಯೇಲ್ ಹನ್ನಾ ನಿಧನ