ಮನೆ ರಾಜಕೀಯ ಅಜಾನ್ ನಿಲ್ಲಿಸದಿದ್ರೆ ದೇವಸ್ಥಾನಗಳಲ್ಲಿ ಸ್ಪೀಕರ್ ಹಾಕಿ ರಾಮ ಭಜನೆ: ಪ್ರಮೋದ್ ಮುತಾಲಿಕ್

ಅಜಾನ್ ನಿಲ್ಲಿಸದಿದ್ರೆ ದೇವಸ್ಥಾನಗಳಲ್ಲಿ ಸ್ಪೀಕರ್ ಹಾಕಿ ರಾಮ ಭಜನೆ: ಪ್ರಮೋದ್ ಮುತಾಲಿಕ್

0

ಬೆಂಗಳೂರು (Bengaluru):  ಮಸೀದಿಗಳಲ್ಲಿ (masjid) ಅಜಾನ್ (ajan) ನಿಲ್ಲಿಸದಿದ್ದರೆ ದೇಗುಲ (temple) ಗಳಲ್ಲಿ ಸ್ಪೀಕರ್ ಹಾಕಿ ರಾಮ ಭಜನೆ ಮಾಡುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ (pramod) ಮುತಾಲಿಕ್ (mutalik) ಎಚ್ಚರಿಕೆ ನೀಡಿದ್ದಾರೆ.

ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ವಿವಾದದ ಬಳಿಕ ಈಗ ಮಸೀದಿಗಳಲ್ಲಿ ಮೈಕ್ ನಿರ್ಬಂಧಕ್ಕೆ ಆಗ್ರಹ ಕೇಳಿ ಬಂದಿದೆ,

ಸರ್ಕಾರಕ್ಕೆ ಮಸೀದಿಗಳಲ್ಲಿ ಅಜಾನ್ ನಿಲ್ಲಿಸುವ ತಾಕತ್ತು ಇಲ್ಲ. ಅಜಾನ್ ನಿಲ್ಲಿಸದಿದ್ರೆ ದೇಗುಲಗಳಲ್ಲಿ ಸ್ಪೀಕರ್ ಹಾಕುತ್ತೇವೆ. ದೇವಸ್ಥಾನದಲ್ಲಿ ಪ್ರತಿದಿನ 5 ಗಂಟೆಗೆ ರಾಮನ ಭಜನೆ ಮಾಡುತ್ತೇವೆ. ಶಿವನಾಮ ಓಂಕಾರಗಳನ್ನು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೈಕ್ ಬ್ಯಾನ್ ಅಭಿಯಾನ ಬಹಳ ವರ್ಷದಿಂದ ನಡೆಯುತ್ತಿದೆ. ಕೋರ್ಟ್ ಆರ್ಡರ್ ಇದ್ದರೂ ಮೈಕ್ ಕಿರಿಕಿರಿ ತಪ್ಪುತ್ತಿಲ್ಲ. ಎಷ್ಟು ದೂರು ನೀಡಿದರೂ ನಮ್ಮ ಮಾತು ಕೇಳುತ್ತಿಲ್ಲ ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದರು.

ಹಿಂದಿನ ಲೇಖನಮೈಸೂರು ಸಮಗ್ರ ಅಭಿವೃದ್ಧಿಗೆ ಒತ್ತು: ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್
ಮುಂದಿನ ಲೇಖನಪರೀಕ್ಷಾ ಕೇಂದ್ರಗಳಲ್ಲಿ ಯಾರೂ ಹಿಜಾಬ್ ಹಾಕಿಲ್ಲ: ಬಿ.ಸಿ.ನಾಗೇಶ್