ಮನೆ ರಾಷ್ಟ್ರೀಯ ಕೇಂದ್ರದ ಮಾಜಿ ಸಚಿವ ಮಾಣಿಕ್‌ರಾವ್‌ ಗವಿತ್ ನಿಧನ

ಕೇಂದ್ರದ ಮಾಜಿ ಸಚಿವ ಮಾಣಿಕ್‌ರಾವ್‌ ಗವಿತ್ ನಿಧನ

0

ಮುಂಬೈ(Mumbai): ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಮಾಣಿಕ್‌ರಾವ್‌ ಗವಿತ್ ಅವರು ನಾಸಿಕ್‌ನ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.

ಅವರಿಗೆ 87 ವರ್ಷ ವಯಸ್ಸಾಗಿತ್ತು.

ಗವಿತ್ ಅವರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರದಲ್ಲಿ (2004 ರಲ್ಲಿ) ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವರಾಗಿ ಮತ್ತು 2013ರಲ್ಲಿ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ಬುಡಕಟ್ಟು ಸಮುದಾಯ ಪ್ರಾಬಲ್ಯವಿರುವ ನಂದೂರ್ಬರ್ ಕ್ಷೇತ್ರದಿಂದ 1980–2009ರ ಅವಧಿಯಲ್ಲಿ 9 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಗವಿತ್, 2014ರ ಚುನಾವಣೆಯಲ್ಲಿ ಸೋಲು ಕಂಡಿದ್ದರು.

ಅವರ ಮಗಳು ನಿರ್ಮಲಾ ಗವಿತ್‌, ಇಗಟ್‌ಪುರಿ ಕ್ಷೇತ್ರದಲ್ಲಿ 2009 ಹಾಗೂ 2014ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಆದರೆ, 2019ರಲ್ಲಿ ಶಿವಸೇನಾದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು.

ಮಾಣಿಕ್‌ರಾವ್‌ ಪುತ್ರ ಭರತ್‌, 2019ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದ ಕಾರಣ ಬಿಜೆಪಿಗೆ ಸೇರಿದ್ದರು.

ಹಿಂದಿನ ಲೇಖನನಾಡಹಬ್ಬ ದಸರಾಗೆ ಪ್ರಧಾನಿ ಮೋದಿ ಆಗಮಿಸುತ್ತಿಲ್ಲ: ಸಿಎಂ ಬೊಮ್ಮಾಯಿ
ಮುಂದಿನ ಲೇಖನದಸರಾಗೆ ಪ್ರಧಾನಿ ಬದಲಾಗಿ ಕೇಂದ್ರದ ನಾಲ್ವರು ಮಂತ್ರಿಗಳು ಆಗಮಿಸುವ ನಿರೀಕ್ಷೆ: ಸಚಿವ ಎಸ್ ಟಿ ಸೋಮಶೇಖರ್