ಮನೆ ಅಪರಾಧ ಮೈಸೂರಿನಲ್ಲಿ ಹಾಡಹಗಲೇ ಕಾರು ಅಡ್ಡಗಟ್ಟಿ ದರೋಡೆ

ಮೈಸೂರಿನಲ್ಲಿ ಹಾಡಹಗಲೇ ಕಾರು ಅಡ್ಡಗಟ್ಟಿ ದರೋಡೆ

0

ಮೈಸೂರು(Robber): ಹಾಡುಹಗಲೇ ಮುಸುಕುದಾರಿಗಳ ಗುಂಪೊಂದು ಕಾರು ಅಡ್ಡಗಟ್ಟಿ  ದಾಳಿ ನಡೆಸಿರುವ ಘಟನೆ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway) ನಡೆದಿದ್ದು, ಸಾಂಸ್ಕೃತಿಕ ನಗರಿಯ ಜನರನ್ನು ಬೆಚ್ಚಿ ಬೀಳಿಸಿದೆ.

ಘಟನೆ ವಿವರ: ಸುಮಾರು ಏಳೆಂಟು ಮುಸುಕುದಾರಿ ಯುವಕರ ಗುಂಪು ದೊಣ್ಣೆಗಳನ್ನು ಹಿಡಿದು ಕಾರಿನ ಮೇಲೆ ದಾಳಿ ಮಾಡಿದ್ದು, ಈ ವೇಳೆ ಚಾಲಕ ಪರಾರಿಯಾಗಲು ಯತ್ನಿಸಿದರೂ ಈ ಗುಂಪು ಬೆನ್ನಟ್ಟಿದೆ. ನಂತರ ಚಾಲಕನನ್ನ ಹಿಡಿದು ಕರೆ ತಂದ ಗುಂಪು, ಕಾರಿನೊಳಗೆ ನೂಕಿ ಕಾರಿನ ಸಮೇತ ಪರಾರಿಯಾಗಿದೆ. ಕಾರಿನಲ್ಲಿ ಕುಳಿತ ಮುಸುಕು ದಾರಿಗಳು ಕ್ಷಣ ಮಾತ್ರದಲ್ಲಿ ಕಾರು ಸಮೇತ ಎಸ್ಕೇಪ್ ಆಗಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೋಲಿಸರು ಸ್ಥಳಿಯರಿಂದ ಮಾಹಿತಿ ಕಲೆ ಹಾಕಿದ್ದಾರೆ. ಹಾಗೆಯೇ ಹೆದ್ದಾರಿಯಲ್ಲಿರುವ ಎಲ್ಲಾ ಸಿಸಿ ಟಿವಿ ದೃಶ್ಯಗಳನ್ನು ಕಲೆ ಹಾಕಿ ತನಿಖೆ ಕೈಗೊಂಡಿದ್ದಾರೆ.

ಘಟನೆ ನಡೆದಿದ್ದು ಏಕೆ? ಅಟ್ಯಾಕ್ ಮಾಡಿದ ಗುಂಪು ಎಲ್ಲಿಯವರು? ಮುಸುಕು ಧರಿಸಿ ದಾಳಿ ನಡೆಸಿದ ಹಿನ್ನಲೆ ಏನು? ಈ ಎಲ್ಲಾ ಪ್ರಶ್ನೆಗಳು ಇನ್ನೂ ಪ್ರಶ್ನೆಗಳಾಗಿಯೇ ಉಳಿದಿದೆ. ಜನನಿಬಿಡ ಪ್ರದೇಶವಾದ ಹೆದ್ದಾರಿಯಲ್ಲೇ ಈ ಘಟನೆ ನಡೆದಿದ್ದು, ವಾಹನ ಸವಾರರು ಘಟನೆಯನ್ನು ಕಂಡು ಅಕ್ಷರಶಃ ಶಾಕ್ ಆಗಿದ್ದಾರೆ.

ಸುಮಾರು 3 ನಿಮಿಷಗಳ ಕಾಲ ಈ ಕೃತ್ಯ ಎಸಗಲಾಗಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆಯಾ ಎಂಬ ಅನುಮಾನ ಮೂಡಿದೆ. ಎರಡು ಮೂರು ನಿಮಿಷದಲ್ಲೇ ಎಲ್ಲವೂ ಮುಗಿದಿದ್ದು, ಕಾರಿನ ಸಮೇತ ಆಗಂತುಕರು ಎಸ್ಕೇಪ್ ಆಗಿದ್ದಾರೆ.

ನಂಜನಗೂಡು ಊಟಿ ಹೈವೇನಲ್ಲಿ ಈ ಘಟನೆ ನಡೆದಿದ್ದು, ಖಾಕಿ ಫುಲ್ ಅಲರ್ಟ್ ಆಗಿದೆ. ಹೆದ್ದಾರಿಯಲ್ಲಿ ಗಸ್ತು ಹೆಚ್ಚಿದ್ದು, ಅನುಮಾನ ಬಂದ ವ್ಯಕ್ತಿಗಳನ್ನ ವಿಚಾರಣೆ ಮಾಡಲಾಗುತ್ತಿದೆ. ಚೆಕ್ ಪೋಸ್ಟ್ ಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಇನ್ನು, ಘಟನೆ ಸಂಬಂಧ ವಿಡಿಯೋ ತುಣುಕು ಲಭ್ಯವಾಗಿದ್ದು, ಅದನ್ನೇ ಪ್ರಮುಖ ಸಾಕ್ಷ್ಯ ಅಂತ ಪರಿಗಣಿಸಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಹಿಂದಿನ ಲೇಖನಅಪಘಾತ: ಪೊಲೀಸ್ ಕಾನ್ಸ್ ಟೇಬಲ್ ಸಾವು
ಮುಂದಿನ ಲೇಖನಡಾ.ರಾಜ್ ಕುಮಾರ ಪುಣ್ಯಸ್ಮರಣೆ: ಗಣ್ಯರಿಂದ ಗೌರವ ನಮನ