ಮನೆ ರಾಜ್ಯ ವಾಹನದೆಡೆಗೆ ಹಣ ಎಸೆದ ಪ್ರಕರಣ: ಮಾನವೀಯತೆ ದೃಷ್ಟಿಯಿಂದ ಹಣ ನೀಡಿದ್ದೆ ಎಂದ ಸಿದ್ದರಾಮಯ್ಯ

ವಾಹನದೆಡೆಗೆ ಹಣ ಎಸೆದ ಪ್ರಕರಣ: ಮಾನವೀಯತೆ ದೃಷ್ಟಿಯಿಂದ ಹಣ ನೀಡಿದ್ದೆ ಎಂದ ಸಿದ್ದರಾಮಯ್ಯ

0

ಬಾಗಲಕೋಟೆ(Bagalakote): ಕುಳಗೇರಿ ಕ್ರಾಸ್‌ ಘಟನೆಯಲ್ಲಿ ಗಾಯಾಳುಗಳಿಗೆ ನೀಡಿದ್ದ ಹಣವನ್ನು ಸಿದ್ದರಾಮಯ್ಯ ಅವರ ವಾಹನದತ್ತ ಹಣ ಎಸೆದ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾನವೀಯತೆ ದೃಷ್ಟಿಯಿಂದ ಹಣ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇದು ಪರಿಹಾರ ಅಲ್ಲ. ಕಷ್ಟದಲ್ಲಿರೋರರಿಗೆ ಅನುಕೂಲ ಆಗಲಿ ಎಂದು ನೀಡಿದ್ದೇನೆ ಎಂದರು.

ಗಲಭೆಯಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರಿಗೂ ಹಣ ನೀಡುತ್ತೇವೆ. ಸತ್ತಿರುವವರು ವಾಪಸ್‌ ಬರುವುದಿಲ್ಲ. ಕಷ್ಟಕ್ಕೆ ಸ್ಪಂದಿಸಬೇಕು ಎಂಬ ಕಾರಣಕ್ಕೆ ನೀಡಲಾಗುತ್ತದೆ. ಹಣವನ್ನು ಪುನಃ ಅವರಿಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.

ಹಿಂದಿನ ಲೇಖನಮೈಸೂರು: ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ
ಮುಂದಿನ ಲೇಖನಮೈಸೂರು ವಿಶ್ವವಿದ್ಯಾನಿಲಯಕ್ಕೆ ಎನ್.ಐ.ಆರ್.​ಎಫ್​​ ನಿಂದ 33ನೇ ರ್ಯಾಂಕ್