ಮನೆ ರಾಜಕೀಯ ಜ. 21ರಿಂದ 29ರ ವರೆಗೆ ರಾಜ್ಯದಾದ್ಯಂತ ಬಿಜೆಪಿ “ವಿಜಯ ಸಂಕಲ್ಪ ಅಭಿಯಾನ”: 1 ಕೋಟಿ ಮಿಸ್...

ಜ. 21ರಿಂದ 29ರ ವರೆಗೆ ರಾಜ್ಯದಾದ್ಯಂತ ಬಿಜೆಪಿ “ವಿಜಯ ಸಂಕಲ್ಪ ಅಭಿಯಾನ”: 1 ಕೋಟಿ ಮಿಸ್ ಕಾಲ್ ಅಭಿಯಾನ

0

ಕೊಪ್ಪಳ(Koppala): ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಕೆಳಮಟ್ಟದಿಂದ ಗಟ್ಟಿಗೊಳಿಸುತ್ತಿರುವ ಬಿಜೆಪಿ ಜ. 21ರಿಂದ 29ರ ತನಕ ರಾಜ್ಯದಾದ್ಯಂತ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜ್ಯದ 58 ಸಾವಿರ ಬೂತ್‌, 312 ಮಂಡಲ ಹಾಗೂ 38 ಸಂಘಟನಾ ಜಿಲ್ಲೆಗಳಲ್ಲಿ ಅಭಿಯಾನ ಜರುಗಲಿದೆ ಎಂದು ಅಭಿಯಾನದ ಜಿಲ್ಲಾ ಸಂಚಾಲಕ ಚಂದ್ರಶೇಖರ ಕವಲೂರು ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಕೊಪ್ಪಳ ನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉದ್ಘಾಟಿಸುವರು. ಅಭಿಯಾನದ ರಾಜ್ಯ ಸಂಚಾಲಕ ಸಿ.ಎನ್‌. ಅಶ್ವತ್ಥನಾರಾಯಣ ವಹಿಸುವರು ಎಂದು ತಿಳಿಸಿದರು.

1 ಕೋಟಿ ಮಿಸ್ ಕಾಲ್ ಅಭಿಯಾನ

ರಾಜ್ಯದಲ್ಲಿ ಒಂದು ಕೋಟಿ ಮಿಸ್‌’ಕಾಲ್‌ ಅಭಿಯಾನ ನಡೆಯಲಿದೆ. ರಾಜ್ಯದಲ್ಲಿ ಐದು ಲಕ್ಷ ಗೋಡೆಬರಹ, ಮೂರು ಕೋಟಿ ವಾಹನಗಳಿಗೆ ಸ್ಟಿಕ್ಕರ್‌ಗಳನ್ನು ಅಂಟಿಸುವುದು, ಪ್ರತಿ ಮನೆಗೆ ಸರ್ಕಾರದ ಸಾಧನೆಗಳ ಕರಪತ್ರ ಮತ್ತು ಸ್ಟಿಕ್ಕರ್‌ ವಿತರಣೆ ಮಾಡಲಾಗುವುದು. ಜಿಲ್ಲೆಯಲ್ಲಿ 1,318 ಬೂತ್‌’ಗಳಿದ್ದು, ಎಂಟು ಮಂಡಲಗಳು ಆರು ಗ್ರಾಮೀಣ ವಿಭಾಗಗಳು ಇವೆ. ಪ್ರತಿ ಬೂತ್‌’ನಲ್ಲಿ ಹತ್ತು ಗೋಡೆ ಬರಹ ಬರೆಯಲಾಗುವುದು ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿದ ಜನಪರ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸಲಾಗುವುದು. ಜ. 29ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮನ್‌ ಕೀ ಬಾತ್‌ ಕಾರ್ಯಕ್ರಮವನ್ನು ಎಲ್ಲಾ ವಾರ್ಡ್‌’ನ ಕಾರ್ಯಕರ್ತರಿಗೆ ತೋರಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

ಅಭಿಯಾನದ ಸಹ ಸಂಚಾಲಕಿ ವಾಣಿಶ್ರೀ ಮಠದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ ಗುಳಗಣ್ಣನವರ, ಜಿಲ್ಲಾ ಮಾಧ್ಯಮ ವಕ್ತಾರ ಮಹೇಶ ಅಂಗಡಿ ಇದ್ದರು.

ಹಿಂದಿನ ಲೇಖನಜ.27 ರಂದು ಅಮಿತ್ ಶಾ, 28 ರಂದು ನಿತಿನ್‌ ಗಡ್ಕರಿ ಹುಬ್ಬಳ್ಳಿಗೆ ಆಗಮನ
ಮುಂದಿನ ಲೇಖನಫೆ. 16 ರಂದು ತ್ರಿಪುರ, 27 ರಂದು  ನಾಗಾಲ್ಯಾಂಡ್, ಮೇಘಾಲಯ ರಾಜ್ಯಗಳ ಚುನಾವಣೆ