ಮನೆ ಅಪರಾಧ ಬೀದಿನಾಯಿ ಕಡಿತ: 30ಕ್ಕೂ ಹೆಚ್ಚು ಜನರಿಗೆ ಗಾಯ

ಬೀದಿನಾಯಿ ಕಡಿತ: 30ಕ್ಕೂ ಹೆಚ್ಚು ಜನರಿಗೆ ಗಾಯ

0

ಬಳ್ಳಾರಿ(Bellary): ನಗರದ ನಗರದ ವಾರ್ಡ್‌ ನಂ.30ರ ವಟ್ಟಪ್ಪಗೇರಿಯಲ್ಲಿ ಮಹಿಳೆಯರು, ಮಕ್ಕಳ ಮೇಲೆ ದಾಳಿ ನಡೆಸಿರುವ ಬೀದಿ ನಾಯಿಗಳು ಸುಮಾರು 30ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಮಂಗಳವಾರ ನಡೆದಿದೆ.

ಗಾಯಾಳುಗಳನ್ನು ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪಾಲಿಕೆ ಆಯುಕ್ತ ರುದ್ರೇಶ್ ಅವರು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಈ ದಾಳಿಯಿಂದ ಜನರು ಆತಂಕಕ್ಕೀಡಾಗಿದ್ದಾರೆ. ಪಾಲಿಕೆ ಸಿಬ್ಬಂದಿ ಬೀದಿನಾಯಿಗಳನ್ನು ಹಿಡಿಯಲು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದಾರೆ.

ಹಿಂದಿನ ಲೇಖನಮಿಷನ್ ಮೋದಿ ಡೆಮೊಕ್ರಾಟಿಕ್ ಡೆವಲಪ್ ಮೆಂಟ್ ಟ್ರಸ್ಟ್’ನ ರಾಜ್ಯದ ಪ್ರಧಾನ ಕಾರ್ಯದರ್ಶಿಯಾಗಿ ತಳಕಾನೆ ರಾಜೇಂದ್ರ ನೇಮಕ
ಮುಂದಿನ ಲೇಖನಜಾತಿ ವಿಚಾರ ಬಂದಾಗ ಕಡಿಮೆ ಮಾತನಾಡಬೇಕು: ಜೆಡಿಎಸ್  ಶಾಸಕ ಡಿ.ಸಿ ತಮ್ಮಣ್ಣ