ಮನೆ ರಾಜ್ಯ ಸಿಎಂ ಸಂಚಾರಕ್ಕೆ ಮಂಡ್ಯ ವಿವಿ ಆವರಣದ ಗೋಡೆ ಕೆಡವಿದ ಜಿಲ್ಲಾಡಳಿತ:  ಸಾರ್ವಜನಿಕರ ಆಕ್ರೋಶ

ಸಿಎಂ ಸಂಚಾರಕ್ಕೆ ಮಂಡ್ಯ ವಿವಿ ಆವರಣದ ಗೋಡೆ ಕೆಡವಿದ ಜಿಲ್ಲಾಡಳಿತ:  ಸಾರ್ವಜನಿಕರ ಆಕ್ರೋಶ

0

ಮಂಡ್ಯ(Mandya): ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸುತ್ತಿರುವ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸುಗಮ ಸಂಚಾರಕ್ಕಾಗಿ ಮಂಡ್ಯ ವಿಶ್ವವಿದ್ಯಾಲಯ ಆವರಣದ ಗೋಡೆ ಕೆಡವಲಾಗಿದೆ.

ಮಂಡ್ಯ ಜಿಲ್ಲಾಡಳಿತದ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ ವಿವಿ ಆವರಣದಲ್ಲಿ ಜೀವನೋಪಾಯ ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿರುವ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಆಗಮಿಸಲಿದ್ದು, ಈ ಕಾರಣದಿಂದ ಮಂಡ್ಯ ವಿವಿ ಆವರಣದ ಗೋಡೆ ಕೆಡವಲಾಗಿದೆ. ವಿವಿಐಪಿ ಸಂಸ್ಕೃತಿಗೆ ಪದೇ ಪದೆ ಕಾಲೇಜು ಆವರಣವನ್ನು ಕೆಡವಲಾಗಿದ್ದು, ಈ ಹಿಂದೆಯೂ ಹಲವು ಬಾರಿ ಸಿದ್ದರಾಮಯ್ಯ, ಹೆಚ್ಡಿಕೆ ಸಿಎಂ ಆಗಿದ್ದಾಗಲೂ ಆವರಣ ಕೆಡವಲಾಗಿತ್ತು.

ಜಿಲ್ಲಾಡಳಿತದ ಈ ನಡೆಗೆ ವಿದ್ಯಾರ್ಥಿಗಳು,  ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಂಜೀವಿನಿ ಸಾಮರ್ಥ್ಯ- ಜೀವನೋಪಾಯ ವರ್ಷ ಕಾರ್ಯಕ್ರಮದ ಉದ್ಘಾಟನೆ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ಹಿಂದಿನ ಲೇಖನಎರಡು ಗುಂಪಿನ ನಡುವೆ ಮಾರಾಮಾರಿ: ಇಬ್ಬರ ಸಾವು
ಮುಂದಿನ ಲೇಖನಕೆಎಂಎಫ್ ನೌಕರರಿಗೂ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅನ್ವಯ: ಕರ್ನಾಟಕ ಹೈಕೋರ್ಟ್