ಮನೆ ರಾಷ್ಟ್ರೀಯ ಗಸ್ತು ತಿರುಗುತ್ತಿದ್ದ ಮೂವರು ಸೈನಿಕರು ಆಳವಾದ ಕಮರಿಗೆ ಬಿದ್ದು ಸಾವು

ಗಸ್ತು ತಿರುಗುತ್ತಿದ್ದ ಮೂವರು ಸೈನಿಕರು ಆಳವಾದ ಕಮರಿಗೆ ಬಿದ್ದು ಸಾವು

0

ಶ್ರೀನಗರ: ಗಡಿ ನಿಯಂತ್ರಣ ರೇಖೆಯಲ್ಲಿ ಗಸ್ತು ತಿರುಗುತ್ತಿದ್ದ ಮೂವರು ಸೈನಿಕರು ಆಳವಾದ ಕಮರಿಗೆ ಜಾರಿಬಿದ್ದು ದುರ್ಮರಣಕ್ಕೀಡಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚ್ಚಿಲ್ ಸೆಕ್ಟರ್‌’ನಲ್ಲಿ ಬುಧವಾರ ನಡೆದಿದೆ.

ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಸೇರಿದಂತೆ ಮೂವರು ಸೈನಿಕರು ದೈನಂದಿನ ಗಸ್ತು ತಿರುಗುತ್ತಿದ್ದಾಗ ಹಿಮಪಾತಕ್ಕೆ ಸಿಲುಕಿ ಕಮರಿಗೆ ಜಾರಿ ಬಿದ್ದಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್ಲ ಮೂವರು ಯೋಧರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ.

ಹಿಂದಿನ ಲೇಖನಶಿವಮೊಗ್ಗ: ಶಂಕಿತ ಉಗ್ರರ ಮನೆಗಳ ಮೇಲೆ ಇಡಿ ಅಧಿಕಾರಿಗಳ ದಾಳಿ
ಮುಂದಿನ ಲೇಖನಮೆಟ್ರೋ ಪಿಲ್ಲರ್​ ಕುಸಿತ ಪ್ರಕರಣ: ಕನ್ಸ್‌’ಟ್ರಕ್ಷನ್ ಕಂಪನಿ ಸೇರಿ 8 ಮಂದಿ ವಿರುದ್ಧ ಎಫ್’ಐಆರ್