ಮನೆ ಜ್ಯೋತಿಷ್ಯ ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ

0

ಮೇಷ: ಯೋಗಿಗಳು ಕೊನೆಗೂ ನಿಮ್ಮನ್ನು ಪ್ರಭಾವಿಸಲು ಶಕ್ತರಾಗಿದ್ದಾರೆ. ಆರ್ಟ್ ಆಫ್ ಲಿವಿಂಗ್ ಸೇರಿದರೆ ಹೇಗೆ? ನೀವು ಸಂಗೀತ ಅಥವಾ ನೃತ್ಯದಲ್ಲಿ ಭಾಗವಹಿಸಲು ಬಯಸಬಹುದು. ಇದು ಸಾಮಾನ್ಯವಾಗಿ ಒಳ್ಳೆಯ ದಿನ ಮತ್ತು ನಿಮಗೆ ಯಶಸ್ಸು ಕಾದಿದೆ.

ವೃಷಭ: ನೀವು ಸೋಮಾರಿಯಾಗಿರುತ್ತೀರಿ ಮತ್ತು ಆರಾಮಾಗಿದ್ದೀರಿ. ಆದ್ದರಿಂದ ಪ್ರಯತ್ನಗಳ ಪರಿಣಾಮ ಕಡಿಮೆಯಾಗುತ್ತದೆ. ನಿಮ್ಮ ನಿಧಾನಗತಿಯನ್ನು ದೂರ ತಳ್ಳಿ ಮತ್ತು ನೀವು ಪ್ರಯತ್ನಿಸುತ್ತಿರುವ ಪ್ರತಿಯೊಂದೂ ನಿಮ್ಮ ಬಳಿಗೆ ಬರುತ್ತದೆ.

ಮಿಥುನ: ಇಂದು ನೀವು ಕೆಲಸಗಳನ್ನು ಪೂರೈಸಲು ತಲೆ ಕೆಡಿಸಿಕೊಳ್ಳುತ್ತೀರಿ. ಆದರೆ ನಿಮ್ಮ ನಮ್ರತೆ ಒಳ್ಳೆಯದೇನೂ ಮಾಡುವುದಿಲ್ಲ. ನೀವು ಅಲ್ಲದೇ ಇದ್ದರೂ ಅದನ್ನು ನಿಮ್ಮ ಬಾಸ್​ಗೆ ತೋರಿಸಬೇಕು. ನಿಮ್ಮ ಅಸಾಧಾರಣ ಸಾಮರ್ಥ್ಯ ಅತ್ಯುತ್ತಮ ಕಾರ್ಯಕ್ಷಮತೆಯಾಗುತ್ತದೆ ಮತ್ತು ದಿನವನ್ನು ಉಳಿಸುತ್ತದೆ.

ಕರ್ಕಾಟಕ: ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಸಂಬಂಧಗಳನ್ನು ಸುಧಾರಿಸಿಕೊಳ್ಳುತ್ತೀರಿ. ನಿಮ್ಮ ಭಕ್ತಿ ಮತ್ತು ಬದ್ಧತೆ ಪ್ರಶಂಸೆ ತರುತ್ತದೆ. ನೀವು ನಿಮ್ಮ ಭವಿಷ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ ಮತ್ತು ಈ ಹಂತ ನಿಮ್ಮ ಆತ್ಮ-ವಿಶ್ವಾಸ ಹೆಚ್ಚಿಸುತ್ತದೆ.

ಸಿಂಹ: ವಿವೇಚನೆ ಇಲ್ಲದೇ ಖರ್ಚು ಮಾಡುವ ನಿಮ್ಮ ಬಯಕೆಯಿಂದ ಇಂದು ನೀವು ಹಣದ ಕೊರತೆಯನ್ನು ಎದುರಿಸುತ್ತೀರಿ. ನೀವು ಅನಗತ್ಯ ವಿಷಯಗಳಲ್ಲಿ ಹಣ ಖರ್ಚು ಮಾಡಬಾರದು. ಅತಿಯಾಗಿ ಖರ್ಚು ಮಾಡುವುದನ್ನೂ ನಿಯಂತ್ರಿಸಬೇಕು.

ಕನ್ಯಾ: ಇಂದು ನಿಮ್ಮಲ್ಲಿರುವ ಸೃಜನಶೀಲ ವ್ಯಕ್ತಿ ವೇದಿಕೆಯಲ್ಲಿ ವಿಜೃಂಭಿಸುತ್ತಾನೆ. ನಿಮಗೆ ಮನರಂಜಕ ಮತ್ತು ಕಾಮಿಡಿಯನ್ ಆಗಿ ಮಹತ್ತರ ಸಾಮರ್ಥ್ಯಗಳಿವೆ ಮತ್ತು ಜನರು ಸಂಜೆಯಲ್ಲಿ ನಿಮ್ಮ ಜೋಕ್ ಸಂಪತ್ತಿಗೆ ಖುಷಿಯಾಗುತ್ತಾರೆ. ಆದರೆ ನೀವು ಇತರೆ ಸಮಸ್ಯೆಗಳು ಮತ್ತು ಕರ್ತವ್ಯಗಳಿಗೂ ಕೊಂಚ ಶಕ್ತಿ ಉಳಿಸಿಕೊಳ್ಳಿ.

ತುಲಾ: ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುತ್ತೀರಿ. ನೀವು ಸಣ್ಣ ವಿಷಯಗಳು ಮತ್ತು ಸಮಸ್ಯೆಗಳ ಕುರಿತು ಕೊಂಚ ಒತ್ತಡ ಅನುಭವಿಸುತ್ತೀರಿ. ಇಂದು ನೀವು ವಿವಿಧ ಮೂಲಗಳಿಂದ ಗಳಿಸಲು ಶಕ್ತರಾಗಿದ್ದೀರಿ.

 ವೃಶ್ಚಿಕ: ನೀವು ವಿವಿಧ ಅಭಿರುಚಿ ಮತ್ತು ಮನೋಧರ್ಮದ ಜನರನ್ನು ಎದುರಿಸಬಹುದು. ಕೆಲವರು ನಿಮಗೆ ಆಶ್ಚರ್ಯಪಡಿಸುತ್ತಾರೆ, ಕೆಲವರು ನಿಮಗೆ ಶಾಕ್ ನೀಡುತ್ತಾರೆ. ಕೆಲವೊಮ್ಮೆ, ಜನರು ನಿಮ್ಮ ಯಶಸ್ಸಿಗೆ ಒಂದೇ ರೀತಿ ಪ್ರತಿಕ್ರಿಯಿಸಿದ್ದಾರಾ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಅದನ್ನು ಜಾಣ್ಮೆ ಮತ್ತು ರಾಜತಂತ್ರೀಯವಾಗಿ ಎದುರಿಸಿ.

ಧನು: ನೀವು ನಿಮ್ಮ ಸುತ್ತಲಿನ ಭಾವಪರವಶತೆಯಲ್ಲಿದ್ದೀರಿ. ನೀವು ಪರ್ಫಾರ್ಮೆನ್ಸ್ ನಿಂದ ಮುನ್ನಡೆಯುವವರು ಮತ್ತು ನೀವು ತೆಗೆದುಕೊಳ್ಳುವ ಯಾವುದೇ ಕಾರ್ಯಕ್ಕೆ ನಿಮ್ಮ ಅತ್ಯುತ್ತಮವಾದುದನ್ನು ನೀಡುತ್ತೀರಿ. ನಿಮ್ಮ ಆಂತರಿಕ ಧ್ವನಿಯನ್ನು ಕೇಳಿರಿ; ಅದು ನಿಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುತ್ತದೆ.

ಮಕರ: ಹೆಚ್ಚಾಗುತ್ತಿರುವ ಕೆಲಸದ ಒತ್ತಡ ಮತ್ತು ಜವಾಬ್ದಾರಿಗಳು ನಿಮ್ಮ ಶಕ್ತಿಯನ್ನು ಹೀರುತ್ತವೆ, ಆದರೆ ನಿಮ್ಮ ಉತ್ಸಾಹವನ್ನಲ್ಲ. ದಿನದ ದ್ವಿತೀಯಾರ್ಧ ನೀವು ನಿಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ದಣಿವಿನಿಂದ ಕೂಡಿರುತ್ತದೆ.

ಕುಂಭ: ನೀವು ಸುತ್ತಮುತ್ತಲೂ ಶಾಂತಿ ಮತ್ತು ಆನಂದ ಹರಡಬೇಕಿದ್ದಲ್ಲಿ, ಈ ದಿನ ನೀವು ಸಾಧಿಸಬಹುದು. ಆದರೂ ನೀವು ನಿಮ್ಮ ಆದ್ಯತೆಗಳು ಮತ್ತು ಆಸಕ್ತಿಗಳನ್ನು ಸಮಸ್ಯೆ ಪರಿಹರಿಸಲು ತ್ಯಾಗ ಮಾಡಬೇಕಾಗಬಹುದು. ಶಾಂತಿದೂತನ ಕಾರ್ಯ ಮಾಡುವುದು ಒಳ್ಳೆಯದು, ಆದರೆ ಜನರು ಅದನ್ನು ಹಗುರವಾಗಿ ಕಾಣುತ್ತಾರೆ.

ಮೀನ: ಪ್ರಮುಖ ವೆಚ್ಚಗಳು ನಿಮ್ಮ ದಾರಿಯಲ್ಲಿವೆ. ಆದರೆ ಒಳ್ಳೆಯ ಸುದ್ದಿ ಎಂದರೆ ಅಗತ್ಯಗಳು ಮತ್ತು ಬಯಕೆಗಳ ನಡುವೆ ಗೆರೆ ಎಳೆದು ಅವುಗಳನ್ನು ತಪ್ಪಿಸಬಹುದು. ಕೊಂಚ ನಿಯಂತ್ರಣ ಹೇರಿಕೊಂಡರೆ ನಂತರ ನಿಮಗೆ ಉಳಿತಾಯ ಹೆಚ್ಚಿಸುತ್ತದೆ.

ಹಿಂದಿನ ಲೇಖನʻಕುವೆಂಪುʼ ಅವರಿಗೆ ಅವಮಾನವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಹೊಣೆ: ಸಚಿವ ಬಿ.ಸಿ.ನಾಗೇಶ್
ಮುಂದಿನ ಲೇಖನಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಯಶಸ್ವಿಗೊಳಿಸುವ ಕುರಿತು ಸಭೆ