ಮನೆ ರಾಜಕೀಯ ಯುದ್ದದ ಕಾರ್ಮೋಡ: ಉಕ್ರೇನ್ ತೊರೆಯುವಂತೆ ಭಾರತದ ನಾಗರಿಕರು, ವಿದ್ಯಾರ್ಥಿಗಳಿಗೆ ಸೂಚನೆ

ಯುದ್ದದ ಕಾರ್ಮೋಡ: ಉಕ್ರೇನ್ ತೊರೆಯುವಂತೆ ಭಾರತದ ನಾಗರಿಕರು, ವಿದ್ಯಾರ್ಥಿಗಳಿಗೆ ಸೂಚನೆ

0

ನವದೆಹಲಿ: ಉಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರುವ ಭೀತಿ ಹೆಚ್ಚಾಗಿದ್ದು,  ಭಾರತ ತನ್ನ ನಾಗರಿಕರು ಮತ್ತು ವಿದ್ಯಾರ್ಥಿಗಳು ದೇಶ​ ತೊರೆಯಲು ಸೂಚನೆ ನೀಡಿದೆ.

ಉಕ್ರೇನ್​ನಲ್ಲಿ ಅನಿಶ್ಚಿತತೆಯ ವಾತಾವರಣ ತಲೆದೋರಿದ ಹಿನ್ನೆಲೆಯಲ್ಲಿ ಭಾರತದ ನಾಗರಿಕರು ಮತ್ತು ವಿಶೇಷವಾಗಿ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ದೇಶ ತೊರೆಯುವಂತೆ ಮನವಿ ಮಾಡಿದೆ. ಅಲ್ಲದೇ, ಅನಿವಾರ್ಯವಲ್ಲದೇ ಇದ್ದಲ್ಲಿ ಉಕ್ರೇನ್​ಗೆ ಯಾರೂ ಪ್ರಯಾಣ ಬೆಳೆಸದಂತೆಯೂ ತಿಳಿಸಿದೆ. ಇದರ ಜೊತೆಗೆ, ಉಕ್ರೇನ್​ನಲ್ಲಿರುವ ಭಾರತದ ರಾಯಭಾರಿ ಕಚೇರಿ ಕೂಡ ದೇಶಕ್ಕೆ ಯಾರೂ ಪ್ರಯಾಣ ಬೆಳೆಸದಿರಲು ಕೋರಿದೆ.

ಉಕ್ರೇನ್​ನಿಂದ ಹೊರಡಲು ಇಚ್ಚಿಸಿದಲ್ಲಿ ಅಗತ್ಯ ನೆರವಿಗಾಗಿ ಭಾರತದ ರಾಯಭಾರಿ ಕಚೇರಿಯನ್ನು ಸಂಪರ್ಕಿಸಬಹುದು. ಭಾರತದ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ತಕ್ಷಣವೇ ದೇಶ ತೊರೆಯಲು ಅಗತ್ಯ ನೆರವು ನೀಡಲಾಗುವುದು ಎಂದು ​ ಭಾರತದ ರಾಯಭಾರಿ ಕಚೇರಿ ತಿಳಿಸಿದೆ.

ಇದಲ್ಲದೇ, ಹಲವಾರು ರಾಷ್ಟ್ರಗಳು ತಮ್ಮ ನಾಗರಿಕರನ್ನು ಉಕ್ರೇನ್​ ತೊರೆಯುವಂತೆ ಈಗಾಗಲೇ ಎಚ್ಚರಿಕೆ ನೀಡಿವೆ. ಉಕ್ರೇನ್​ ಗಡಿಭಾಗದಲ್ಲಿ ರಷ್ಯಾ ತನ್ನ ಸೇನಾ ಬಲವನ್ನು ಹೆಚ್ಚಿಸುತ್ತಿರುವ ಮಧ್ಯೆಯೇ ಉಕ್ರೇನ್​ ಮೇಲೆ ಯಾವುದೇ ಯುದ್ಧ ಸಾರುವ ಯೋಜನೆ ಇಲ್ಲ ಎಂದು ಹೇಳಿಕೆ ನೀಡಿದೆ. ಆದಾಗ್ಯೂ ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಹಿಂದಿನ ಲೇಖನಅಜಿತ್ ಕುಮಾರ್ ನಟನೆಯ ವಲಿಮೈ ಫೆ.24 ರಂದು ತೆರೆಗೆ
ಮುಂದಿನ ಲೇಖನಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬಲವರ್ಧನೆಗೆ ಸರ್ವ ಕ್ರಮ :ಹೆಚ್ ಡಿಕೆ