ಮನೆ ಅಪರಾಧ ಮಗುವಿನೆದುರು ಆತ್ಮಹತ್ಯೆಗೆ ಶರಣಾದ ಗೃಹಿಣಿ

ಮಗುವಿನೆದುರು ಆತ್ಮಹತ್ಯೆಗೆ ಶರಣಾದ ಗೃಹಿಣಿ

0

ಮಂಡ್ಯ(Mandya) : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಗೃಹಿಣಿಯೊಬ್ಬಳು ಡೆತ್ ನೋಟ್ ಬರೆದಿಟ್ಟು, ತನ್ನ ಮಗುವಿನೆದುರಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲ್ಲಳ್ಳಿಯ ವಿವಿ ನಗರದಲ್ಲಿ ನಡೆದಿದೆ.

ರವಿ ಕುಮಾರ್‌ ಎಂಬುವವರ ಪತ್ನಿ ಕವಿತಾ ಆತ್ಮಹತ್ಯೆಗೆ ಶರಣಾದ ಮಹಿಳೆ.

7 ವರ್ಷಗಳ ಹಿಂದೆ ಮದುವೆಯಾಗಿದ್ದ ಈ ದಂಪತಿಗೆ 1  ವರ್ಷದ ಗಂಡು ಮಗುವಿತ್ತು. ಮನೆಯಲ್ಲಿ ಯಾರು ಇಲ್ಲದ ವೇಳೆ ಕವಿತಾ ತನ್ನ ಮಗುವಿನ ಎದುರುಗಡೆ ನೇಣು ಹಾಕಿಕೊಂಡಿದ್ದು, ತಾಯಿ ಸಾವಿಗೀಡಾದ್ದರಿಂದ ಗಾಬರಿಯಾದ ಮಗು ಸುಮಾರುಒಂದು ಗಂಟೆಗಳ ಕಾಲ ಮಮ್ಮಲ ಮರುಗಿದೆ. ಮಗುವಿನ ಆಕ್ರಂದನ ಕೇಳಿ ಅಕ್ಕ-ಪಕ್ಕದ ಮನೆಯವರು ಕಿಟಕಿಯಿಂದ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಒಂದು ಕಡೆ ಕವಿತಾ ನೇಣು ಬಿಗಿದುಕೊಂಡಿದ್ದು, ಮತ್ತೊಂದು ಕಡೆ ಪುಟ್ಟ ಕಂದಮ್ಮ ಗೋಳಾಡುವ ದೃಶ್ಯ ಕಂಡುಬಂದಿದೆ. ನಂತರ ಕವಿತಾ ಪತಿ ರವಿಶಂಕರ್ ಮತ್ತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಮಂಡ್ಯದ ವಿವಿ ನಗರದಲ್ಲಿ ವಾಸವಿದ್ದ ದಂಪತಿ, ನಿನ್ನೆ ಪತಿಗೆ ಮೈಸೂರಿನ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕೆಲಸ ಸಿಕ್ಕಿತ್ತು. ಈ ಹಿನ್ನಲೆ ಡ್ಯೂಟಿ ರಿಪೋರ್ಟ್ ಮಾಡಿ ಕೊಳ್ಳಲು ತೆರಳಿದ್ದ ಪತಿ ರವಿ ಕುಮಾರ್ ಮಂಡ್ಯಕ್ಕೆ ಬಂದಾಗ ಘಟನೆ ಬೆಳಕಿಗೆ. ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನರೈತ ಚಳವಳಿ ಹತ್ತಿಕ್ಕಲು ಬಿಜೆಪಿ ಸರ್ಕಾರ, ಆರ್ ಎಸ್ ಎಸ್ ನಿಂದ ನಿರಂತರ ದಾಳಿ: ಬಡಗಲಪುರ ನಾಗೇಂದ್ರ
ಮುಂದಿನ ಲೇಖನಅತ್ಯಾಚಾರ ಅಪರಾಧ ಲಿಂಗ ತಟಸ್ಥವಾಗಿರಬೇಕು: ಕೇರಳ ಹೈಕೋರ್ಟ್ ಅಭಿಪ್ರಾಯ