ಮನೆ ಅಪರಾಧ ಹಣದ ವಿಚಾರಕ್ಕೆ ಜಗಳ: ಜಗಳ ಬಿಡಿಸಲು ಹೋದವನ ಕೊಲೆ

ಹಣದ ವಿಚಾರಕ್ಕೆ ಜಗಳ: ಜಗಳ ಬಿಡಿಸಲು ಹೋದವನ ಕೊಲೆ

0

ಮೈಸೂರು(Mysuru): ಹಣದ ವಿಚಾರಕ್ಕೆ ಸ್ನೇಹಿತರ ನಡುವೆ ನಡೆಯುತ್ತಿದ್ದ ಜಗಳನ್ನು ಬಿಡಿಸಲು ಹೋದ ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರಾಮನಹಳ್ಳಿಯಲ್ಲಿ ನಡೆದಿದೆ.

ರಾಮನಹಳ್ಳಿ ಗ್ರಾಮದ ನಿವಾಸಿಯಾದ ಶೇಖರ್ ಕೊಲೆಯಾದ ವ್ಯಕ್ತಿ.

ಹಣದ ವಿಚಾರಕ್ಕೆ ಸ್ನೇಹಿತರ ಜಗಳ: ಶೇಖರ್, ಸಿದ್ದನಾಯಕ ಮತ್ತು ರಾಜೇಶ್ ಮೂವರು ಸ್ನೇಹಿತರಾಗಿದ್ದು, ಸಿದ್ದನಾಯಕ ಅವರ ಮನೆಗೆ ಶನಿವಾರ ಸಂಜೆ ಊಟಕ್ಕೆ ತೆರಳಿದ್ದಾನೆ. ಊಟದ ಸಮಯದಲ್ಲಿ 1,500 ರೂ. ಹಣದ ವಿಚಾರವಾಗಿ ರಾಜೇಶ್ ಮತ್ತು ಸಿದ್ದನಾಯಕ ನಡುವೆ ಜಗಳ ಶುರುವಾಗಿತ್ತು.

ಇದೇ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಶೇಖರ್ ಇಬ್ಬರನ್ನು ಸಮಾಧಾನ ಪಡಿಸಲು ಮುಂದಾಗಿದ್ದಾನೆ. ಆ ವೇಳೆ ಸಿದ್ದನಾಯಕ ಶೇಖರ್​​ಗೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ಅವರಿಗೆ ಕೆ.ಆರ್ ನಗರ ಹಾಗೂ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶೇಖರ್ ಮೃತಪಟ್ಟಿದ್ದಾರೆ.

ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿದ್ದನಾಯಕನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.