ಕುಡಿತ
ಹಬ್ಬ ಮಾಡೋಣ
ಸಾಮಾನು ಸೀರೆ ತರ್ತೀನಂತ ಹೋದವನು
ಹೋಗೇ ಬೀಟ್ಟ ಎಲ್ಲಿಗೆ?
ದಿನಾ ಸಂಜೆ ಹೋಗೊ ಬಾರಿಗೆ.
ಬಾರಿ ಬಾರಿ ಬಗ್ಗಿ ನೋಡಿ
ಸುಸ್ತಾಗಿ ಹೆಂಡತಿ ಮಲಗೇಬಿಟ್ಟಳು ಕದವಿಕ್ಕಿ.
ಬೆಳಗ್ಗೆ ಎದ್ದು ಪಕ್ಕದವರಿಗೆ ಹೇಳಿದಳು
ಕರೆತಂದಿದ್ದಕ್ಕೆ ನಾನು ನಿಮಗೆ ತುಂಬಾ ಆಭಾರಿ.
ಕಾರಣ :
ಅವ ಕುಡಿದು ತೂರಾಡಿ ಬಿದ್ದಿದ್ದು ಪಕ್ಕದ ಮೋರಿಲೀರಿ!
**********
ಬುದ್ಧಿವಂತ :
ನಿಂಗೇನು ಬೇರೆ ಕೆಲಸ ಇಲ್ವಾ?
ಮತ್ಯಾಕ್ ಬಂದೆ?
ಅದೇ ನೀವೇ ಹೇಳಿದ್ರಲ್ಲಾ.
ಅದಕೆ ಬಂದೆ.
ಹಾಂಗಂದರೆ ಏನೋ ಅದು?
ಏನಿಲ್ಲಾ ಮತ್ತೆ ಮತ್ತೆ……
ಬೇಗ ಹೇಳೋ. ನುಲಿಬೇಡಾ.
ನನಗೆ ಹೆದರಿಕೆ ಆಗುತ್ತೆ. ಹಿ…ಹಿ…
ಇದು ಬೇರೆ ಆಗುತ್ತಾ? ಭಂಡಾ ನೀನು.
ಹಾಂಗಂದರೆ?
ಥೊ….ಹೋಗೊ. ನಿನ್ನ ಹತ್ತಿರ ಮಾತಾಡೋರಿಗೆ ಬುದ್ಧಿ ಇಲ್ಲ.
ಹಿ….ಹಿ…. ಈಗಲಾದರೂ ಗೊತ್ತಾಯಿತಲ್ಲ. ಬತ್ತಿನಿ.
ಲೋ….ನಿಂತ್ಕೊಳ್ಳೋ. ಅದೇನಂತ ಹೇಳಿಬಿಟ್ಟು ಹೋಗು.
ಅದೇ ನೀವೇ ಹೇಳಿದ್ರಲ್ಲಾ. ನಿಮಗೆ ಬುದ್ಧಿ ಇಲ್ಲ ಅಂತ. ಅದನ್ನೇ ಹೇಳವಾ ಅಂತ ಬಂದಿದ್ದೆ. ಬರ್ಲಾ…..??














