ಮನೆ ಕಾನೂನು ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಆರೋಪಿಗಳಿಗೆ ನ.11ರವರೆಗೆ ನ್ಯಾಯಾಂಗ ಬಂಧನ

ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಆರೋಪಿಗಳಿಗೆ ನ.11ರವರೆಗೆ ನ್ಯಾಯಾಂಗ ಬಂಧನ

0

ರಾಮನಗರ(Ramnagar): ಬಂಡೆಮಠದ ಬಸವಲಿಂಗ ಸ್ವಾಮೀಜಿ ‌ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಮೂವರು ಆರೋಪಿಗಳನ್ನು ನವೆಂಬರ್ 11ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 1ನೇ ಹೆಚ್ಚುವರಿ ನ್ಯಾಯಾಧೀಶರಾದ ಎಂ. ಧನಲಕ್ಷ್ಮಿ ಆದೇಶ ಹೊರಡಿಸಿದರು.

ಇಂದು ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ ಆರೋಪಿಗಳನ್ನು ಮಾಗಡಿ ಪೊಲೀಸರು 1ನೇ ಜೆಎಂಎಫ್​​ಸಿ ಕೋರ್ಟ್’​ಗೆ ಹಾಜರು ಪಡಿಸಿದರು.

ಮೃತ್ಯುಂಜಯ ಸ್ವಾಮೀಜಿ ಮತ್ತು ವಕೀಲ ಮಹದೇವ್ ಅವರನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ರವಾನೆ ಮಾಡಲಾಯಿತು. ಹಾಗೆ ನೀಲಾಂಬಿಕೆಯನ್ನ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವಂತೆ ಆದೇಶ ಹೊರಡಿಸಲಾಯಿತು.  ನ.15ಕ್ಕೆ ಪ್ರಕರಣದ ವಿಚಾರಣೆಯನ್ನ ಮುಂದೂಡಲಾಯಿತು.

ಘಟನೆಯ ಹಿನ್ನೆಲೆ: ಈ ಮೂವರು ಆರೋಪಿಗಳು ಬಸವಲಿಂಗ ಸಾಮೀಜಿ ಸಾವಿಗೆ ಕಾರಣರಾಗಿದ್ದರು. ಕಣ್ಣೂರು ಶ್ರೀ ನಾನೇ ಹನಿಟ್ರ್ಯಾಪ್ ಮಾಡಿಸಿದ್ದೆ ಎಂದು ಒಪ್ಪಿಕೊಂಡಿದ್ದು, ನೀಲಾಂಬಿಕೆಯನ್ನ ಮುಂದಿಟ್ಟುಕೊಂಡು ಹನಿಟ್ರ್ಯಾಪ್​ ಮಾಡಲಾಗಿತ್ತು. ಸ್ವಾಮೀಜಿ ಮರ್ಯಾದೆ ತೆಗೆಯಲು ವಿಡಿಯೋ ಮಾಡಿಸಿದ್ದೆ. 3 ತಿಂಗಳ ಹಿಂದೆಯೇ ಸ್ವಾಮೀಜಿ ವಿಡಿಯೋ ರೆಡಿಯಾಗಿತ್ತು ಎಂದು ಕಣ್ಣೂರು ಶ್ರೀ(ಮೃತ್ಯುಂಜಯ ಸ್ವಾಮೀಜಿ) ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಬಂಡೆಮಠ ಶ್ರೀ ಹನಿಟ್ರ್ಯಾಪ್​ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದರು.