ಲೆಮನ್ ಜ್ಯೂಸ್ ಆರೋಗ್ಯಕ್ಕೆ ಉತ್ತಮ..!
ಜೈಲಿನಲ್ಲಿರುವವರು ಮತ ಚಲಾಯಿಸಬಹುದೇ ?
ಉದ್ಯೋಗ ಅವಕಾಶ, ಆನ್ಲೈನಲ್ಲಿ ಅರ್ಜಿ ಸಲ್ಲಿಸಿ….
ಯಾಕೆ ಮೇ 8ನ್ನ ವಿಶ್ವ ರೆಡ್ ಕ್ರಾಸ್ ದಿನ ಎಂದು ಆಚರಿಸಲಾಗುತ್ತದೆ
ಬೆಂಗಳೂರಿನಲ್ಲಿ ಭೂಕುಸಿತ
ಸುನಿತಾ ಜೊತೆ ಗಗನಕ್ಕೇರಿದ ಭಗವದ್ಗೀತೆ, ಗಣೇಶ ಮೂರ್ತಿ..!
ಮೈಸೂರಿನ ಹೆಬ್ಬಾಳ್ ಕೆರೆಯಲ್ಲಿ ಮೀನುಗಳ ಮಾರಣಹೋಮ….
ಸುಳ್ಳು ಮಾಹಿತಿಯನ್ನ ಸ್ಪಷ್ಟಪಡಿಸಿದ ಆರೋಗ್ಯ ಇಲಾಖೆ..
ಹನುಮ ಕೇಸರಿಯಾದ ಕಥೆ….
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
‘ನೀನಾರಿಗಾದೆಯೋ ಎಲೆ ಮಾನವಾ, ಹರಿಹರೀ ಗೋವು ನಾನು, ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೇ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲುಗ್ಬೊರವಾದೆ ನೀನಾರಿಗಾದೆಯೋ ಎಲೆ ಮಾನವ’ – ಇದು ಎಸ್.ಜಿ. ನರಸಿಂಹಾಚಾರ್ ಅವರ ಕವನ.
ಮಾನವಜನ್ಮ ನಮಗೆ ದೊರಕಿದ್ದು ಹಿಂದಿನ ಜನ್ಮದ ಪುಣ್ಯಫಲ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಪರೋಪಕಾರಂ ಇದಂ ಶರೀರಂ ಎನ್ನುವ ಮಾತಿನಂತೆ ಜೀವನದಲ್ಲಿಸ್ವಲ್ಪವಾದರೂ ಪರರಿಗೆ ನೀಡುವ ಮಹಾಗುಣವನ್ನು ಬೆಳೆಸಿಕೊಂಡಿರಲೇಬೇಕು. ನಾವು ಈ ಜಗತ್ತಿಗೆ ಏನು ನೀಡುತ್ತೇವೆಯೋ ಅದನ್ನೇ ಮತ್ತೆ ಪಡೆಯುತ್ತೇವೆ ಎಂಬ ಒಂದು ಮಾತಿದೆ. ಅಂದರೆ ಅದು ಪ್ರೀತಿ, ಅನುಕಂಪ, ಸಹಾಯಹಸ್ತ ಏನೇ ಆಗಿರಬಹುದು.
ಸಹಾಯದಿಂದ ಸಂತೋಷ
ನಾವು ಮಾಡುವ ಸಣ್ಣ ಸಣ್ಣ ಸಹಾಯವೂ ಕೂಡಾ ಖುಷಿ ನೀಡುತ್ತದೆ. ಉದಾಹರಣೆಗೆ ನಾವು ನಿತ್ಯ ಓಡಾಡುವ ಬಸ್ನಲ್ಲಿವಯಸ್ಸಾದವರು, ಕುರುಡರೋ ಕುಂಟರೋ ಬಸ್ ಹತ್ತಬೇಕಿರುತ್ತದೆ. ತ್ರಾಸದಿಂದಲೇ ಬಸ್ಹತ್ತಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಕಂಡೂ ಕಾಣದಂತೆ ವರ್ತಿಸುವ ಬದಲು, ಅವರಿಗೆ ಸಹಾಯ ಹಸ್ತ ನೀಡುವುದರಲ್ಲಿಆನಂದವನ್ನು ಕಂಡುಕೊಳ್ಳಬಹುದು. ಸಹಾಯ ಪಡೆದುಕೊಂಡವನ ಮನದಲ್ಲಿಮೂಡುವ ಸಂತೋಷ, ಮನದಲ್ಲಿಅಂದುಕೊಳ್ಳುವ ಅವರ ಆಶೀರ್ವಾದ ನಮಗೆ ದೊರಕುವ ಪಾಸಿಟಿವ್ ಶಕ್ತಿ.
ಯಾರೋ ಕಷ್ಟದಲ್ಲಿರುತ್ತಾರೆ. ಅವರಿಗೆ ಸಹಾಯ ಮಾಡುವುದರಿಂದ ಜಗತ್ತಿನಲ್ಲಿಯಾವುದೋ ಒಂದು ಸಕಾರಾತ್ಮಕ ಘಟನೆಗೆ ನಾವು ಕಾರಣರಾಗುತ್ತಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಹಾಗಾಗಿ ಇತರರಿಗೆ ಸಹಾಯ ಮಾಡುವುದರಿಂದ ಖುಷಿಯ ಅನುಭವ ಉಂಟಾಗುವುದು. ಖುಷಿ ಖುಷಿಯಾಗಿ ಇರುವುದರಿಂದ ಕೆಲಸ ಮಾಡುವ ಜಾಗದಲ್ಲಿಯೂ ಹೆಚ್ಚು ಕ್ರಿಯಾಶೀಲರಾಗಿರಬಹುದು. ಆನಂದದಿಂದ ಕೆಲಸ ಮಾಡುವುದರಿಂದ ಕಚೇರಿಯಲ್ಲಿಉತ್ಪಾದನಾ ಮಟ್ಟವು ಹೆಚ್ಚಾಗಿರುತ್ತದೆ. ಮಾತ್ರವಲ್ಲಇದರಿಂದ ಸಾಮಾಜಿಕವಾಗಿ ಬಂಧಬೆಸೆಯುವುದಕ್ಕೆ ಕಾರಣವಾಗುವುದು. ಯಾರಿಗೋ ಒಳ್ಳೆಯದು ಮಾಡಿರುತ್ತೀರಿ. ಇನ್ನೊಬ್ಬರ ಬದುಕಿಗೆ ಆಸರೆಯಾಗಿರುತ್ತೀರಿ. ಅದನ್ನು ಅವರು ಜೀವನ ಪರ್ಯಂತ ಕೃತಜ್ಞತಾಪೂರ್ವಕವಾಗಿ ನೆನಪಿಸಿಕೊಳ್ಳುತ್ತಾರೆ. ಅದರಿಂದ ವ್ಯಕ್ತಿ ವ್ಯಕ್ತಿಯ ನಡುವೆ ಬಾಂಧವ್ಯ ಹೆಚ್ಚುವುದು.
ನಮ್ಮ ಜೀವನದಲ್ಲಿಬೇಡಿ ಬಂದವರಿಗೆ ಸಹಾಯ ಮಾಡುವುದರಲ್ಲಿಸಿಗುವ ಆನಂದ, ಮತ್ತೊಬ್ಬರಿಂದ ಪಡೆಯುವುದರಲ್ಲಿಇರುವುದಿಲ್ಲ. ಆದರೆ ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೆ ಪ್ರತಿಫಲಾಪೇಕ್ಷೆ ಇರಬಾರದು. ನಿರೀಕ್ಷೆ ನಮ್ಮನ್ನು ಕೊರಗುವಂತೆ ಮಾಡುವುದು. ಅದು ಜೀವನದಲ್ಲಿದುಃಖ ತರುತ್ತದೆ. ಆದ್ದರಿಂದ ಪ್ರತಿಫಲದ ನಿರೀಕ್ಷೆ ಇಲ್ಲದೇ ಮಾಡುವ ಸಹಾಯ ನಮ್ಮನ್ನು ಖುಷಿಯಾಗಿರುವಂತೆ ಮಾಡುತ್ತದೆ. ಅದೇ ಸಂತಸದಿಂದ ಜೀವನದಲ್ಲಿನ ಒತ್ತಡ ಕಡಿಮೆ ಆಗುವುದು.
ಪರರಿಗಾಗಿ ಜೀವಿಸಿ
ಸಹಾಯ ಮಾಡುವುದು ಅಥವಾ ಪರೋಪಕಾರ ಮಾಡುವುದು ಅಂದರೆ ಕೇವಲ ಹಣದ ಸಹಾಯ ಅಷ್ಟೇ ಅಲ್ಲ. ಇತರರಿಗೆ ಮತ್ಯಾವುದೋ ರೀತಿಯಲ್ಲಿಯೂ ಸಹಾಯ ಮಾಡುವುದೂ ಆಗಿದೆ. ಅಶಕ್ತರನ್ನು ಕೈಹಿಡಿದು ನಡೆಸುವುದು, ಇರುವ ಜ್ಞಾನವನ್ನು ಧಾರೆ ಎರೆಯುವುದು, ಗೊತ್ತಿಲ್ಲದವರಿಗೆ ಅಗತ್ಯ ಮಾಹಿತಿ ನೀಡುವುದು, ಇರುವವರಿಗೆ ಮಾಹಿತಿ ನೀಡುವುದು ಇವೇ ಮೊದಲಾದ ರೀತಿಯ ಸಣ್ಣ ಸಣ್ಣ ಸಹಾಯಗಳು ಕೂಡಾ ಸಹಾಯ ಪಡೆದವರ ಮೊಗದಲ್ಲಿಸಂತಸದ ನಗೆಯನ್ನು ಹೊರಸೂಸುವುದು.
ಸಹಾಯ ಮಾಡುವುದು ಮನುಷ್ಯಜೀವನದ ಸಾರ್ಥಕತೆಯನ್ನು ಸೂಚಿಸುತ್ತದೆ. ಅಂದರೆ ಮನುಷ್ಯ ಜೀವನ ಇರುವುದು ಪರೋಪಕಾರಕ್ಕಾಗಿ. ಪ್ರಕೃತಿಯಲ್ಲಿಮರಗಿಡಗಳು ಹಣ್ಣುಗಳನ್ನು ಕೊಡುವಂತೆ, ಹಸುಗಳು ಪರೋಪಕಾರ ಗುಣದಿಂದಲೇ ಹಾಲು ನೀಡುವಂತೆ ಈ ಮನುಷ್ಯಜೀವನ ನಮಗೆ ಸಿಕ್ಕಿರುವುದು ಪರರಿಗೆ ಸಹಾಯ ಮಾಡುವುದಕ್ಕೆ ಎಂದೇ ಭಾವಿಸಬೇಕು.
ಸಹಾಯ ಮಾಡುವುದರ ಮೂಲಕ ಮನುಷ್ಯ ತನ್ನ ಜೀವನವನ್ನು ಆದಷ್ಟು ಸಾರ್ಥಕ್ಯಗೊಳಿಸಿಕೊಳ್ಳಬೇಕು. ಇತರರಿಗೆ ಸಹಾಯ ಮಾಡುವುದರಿಂದ ಪಡೆದುಕೊಂಡವರಿಗೆ ಮಾತ್ರ ಒಳ್ಳೆಯದಾಗುವುದಲ್ಲ, ಒಳ್ಳೆಯತನದ ಪರಿಣಾಮ ನಮ್ಮ ಮೇಲೂ ಬೀರುವುದು. ಇತರರಿಗೆ ಸಹಾಯ ಮಾಡುವುದರಿಂದ ಸಕಾರಾತ್ಮಕ ಪರಿಣಾಮವನ್ನು ಕಂಡುಕೊಳ್ಳಬಹುದು.
ನೋಡಿ. ಜೀವನಕ್ಕೊಂದು ಅರ್ಥ ಕಂಡುಕೊಳ್ಳುವುದು ಅಂದರೆ ಅದು ತಾನಾಗಿ ಬರುವುದಿಲ್ಲ. ನಮ್ಮ ಚಟುವಟಿಕೆಗಳಿಂದಲೇ ನಾವದನ್ನು ಅರ್ಥ ಪೂರ್ಣವಾಗಿಸಿಕೊಳ್ಳಬಹುದು. ‘ಚೈನೀಸ್ ನಾಣ್ನುಡಿಯೊಂದಿದೆ. ನಿಮಗೆ ಒಂದು ಗಂಟೆಯ ಖುಷಿ ಬೇಕಿದ್ದರೆ ಚಿಕ್ಕ ನಿದ್ರೆ ಮಾಡಿ, ಒಂದು ದಿನದ ಖುಷಿ ಬೇಕಿದ್ದರೆ ಫಿಶಿಂಗ್ ಕೈಗೊಳ್ಳಿ, ಹಾಗೆಯೇ ಜೀವನಪೂರ್ತಿ ಖುಷಿ ಬೇಕಿದ್ದರೆ ಇತರರಿಗೆ ಸಹಾಯ ಮಾಡಿ’ ಎಂದು.
ಕೊಡುವುದರಲ್ಲಿನ ಖುಷಿ
‘ಪಡೆಯುವುದಕ್ಕಿಂತ ಕೊಡುವುದರಲ್ಲಿಹೆಚ್ಚು ಆನಂದವಿದೆ’ ಎಂಬ ಮಾತಿದೆ. ಕೊಡುವ ಗುಣ ನಮ್ಮಲ್ಲಿದ್ದರೆ ಅದನ್ನು ನಾವು ಸತ್ಪಾತ್ರರಿಗೆ ನೀಡಬೇಕು. ಕೆಲವೊಮ್ಮೆ ಹಣದಲ್ಲಿನೀಡಲಾಗದೇ ಇದ್ದುದನ್ನು ನಮ್ಮ ಸಮಯ, ಅನುಕಂಪ ನೀಡುವುದರ ಮೂಲಕವೂ ನೀಡಬಹುದು. ಎಲ್ಲರಿಗೂ ಸಮಯವಂತೂ ಇದ್ದೇ ಇರುತ್ತದೆ. ಕಷ್ಟದಲ್ಲಿರುವವರು ದುಃಖವನ್ನು ಹೇಳಿಕೊಳ್ಳುತ್ತಿರುತ್ತಾರೆ ಎಂದಾದರೆ ಅವರಿಗೆ ಒಂದಷ್ಟು ಹೊತ್ತು ಸಮಯ ಮೀಸಲಿಡಿ. ಅವರ ಕಷ್ಟಗಳಿಗೆ ಸ್ಪಂದಿಸುವುದು ಕೂಡಾ ಒಂದು ರೀತಿಯಲ್ಲಿಸಹಾಯ ಮಾಡಿದಂತೆ.
ಕೊನೆಯದಾಗಿ ನಾವು ಏನೇ ಮಾಡುವುದಿದ್ದರೂ ಅದರಿಂದ ಫಲಾಪೇಕ್ಷೆ ಇರಬಾರದು. ಭಗವದ್ಗೀತೆಯಲ್ಲಿಶ್ರೀಕೃಷ್ಣ ಪರಮಾತ್ಮ ಹೇಳಿರುವಂತೆ ‘ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಶು ಕದಾಚನ’ಎನ್ನುವಂತೆ ಯಾವುದೇ ಫಲಾಪೇಕ್ಷೆಯಿಲ್ಲದೇ ಇತರರಿಗೆ ಸಹಾಯ ಮಾಡಬೇಕು. ಅದು ನಿಜವಾದ ಮಾನವ ಧರ್ಮ.