ಮನೆ ಅಪರಾಧ ಪಿರಿಯಾಪಟ್ಟಣದ ಚರ್ಚ್ ಮೇಲೆ ಕಿಡಿಗೇಡಿಗಳ ದಾಳಿ: ಪೀಠೋಪಕರಣ ಧ್ವಂಸ

ಪಿರಿಯಾಪಟ್ಟಣದ ಚರ್ಚ್ ಮೇಲೆ ಕಿಡಿಗೇಡಿಗಳ ದಾಳಿ: ಪೀಠೋಪಕರಣ ಧ್ವಂಸ

0

ಮೈಸೂರು(Mysuru): ಜಿಲ್ಲೆಯ ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸೇಂಟ್​​ ಮೇರಿ ಚರ್ಚ್​ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದು, ಅಲ್ಲಿದ್ದ ಪೀಠೋಪಕರಣ, ಬಾಲಯೇಸು ಮೂರ್ತಿಯನ್ನು ಒಡೆದು ಹಾಕಿದ್ದಾರೆ.

ಮಂಗಳವಾರ ರಾತ್ರಿ ಚರ್ಚ್’​ಗೆ ನುಗ್ಗಿರುವ ದುಷ್ಕರ್ಮಿಗಳು ಅಲ್ಲಿದ್ದ ಹೂಕುಂಡ, ಅಲಂಕಾರಿಕ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದಾರೆ. ಅಲ್ಲದೇ, ಮೈಕ್​ ಮತ್ತು ಹುಂಡಿಯನ್ನೂ ಕಳವು ಮಾಡಿದ್ದಾರೆ. ಪೀಠೋಪಕರಣಗಳನ್ನೂ ಧ್ವಂಸ ಮಾಡಲಾಗಿದೆ.

ಚರ್ಚಿನ ಫಾದರ್​ ಮೈಸೂರಿಗೆ ಹೋದಾಗ ಈ ಕೃತ್ಯ ನಡೆಸಲಾಗಿದೆ. ಚರ್ಚ್​ನ ಫಾದರ್​ ಜಾನ್​’ಪೌಲ್​ ಪಿರಿಯಾಪಟ್ಟಣ ಪೊಲೀಸ್​ ಠಾಣೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.