ಮನೆ ಅಪರಾಧ ತಂದೆಯಿಂದಲೇ ಮದ್ಯವ್ಯಸನಿ ಮಗನ ಹತ್ಯೆ

ತಂದೆಯಿಂದಲೇ ಮದ್ಯವ್ಯಸನಿ ಮಗನ ಹತ್ಯೆ

0

ಚಿಕ್ಕೋಡಿ: ಮದ್ಯವ್ಯಸನಿ ಮಗನನ್ನು ತಂದೆಯೇ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ಜರುಗಿದೆ.

ಆರೋಪಿ ಜಿನ್ನಪ್ಪಾ ಕಾಂಜಿ ಆರೋಪಿ. ಭರತೇಶ ಜಿನ್ನಪ್ಪಾ ಕಾಂಜಿ (30) ಕೊಲೆಯಾದ ವ್ಯಕ್ತಿ.

ಜಿನ್ನಪ್ಪ ಕಾಂಜಿ ಮಗನ ತಲೆಯ ಹಿಂಭಾಗಕ್ಕೆ ಹರಿತ ಆಯುಧದಿಂದ ಹೊಡೆದು ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಭರತೇಶ್ ಕಾಂಜಿ ಮದ್ಯ ವ್ಯಸನಿ ಆಗಿದ್ದು ನಿತ್ಯ ಮನೆಯಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದ. ಮನೆಯಲ್ಲಿರುವ ವಸ್ತುಗಳನ್ನು ಮಾರಾಟ ಮಾಡಿ ಮದ್ಯಪಾನ ಮಾಡುತ್ತಿದ್ದ. ಪದೇ ಪದೇ ಜಗಳವಾಡುತ್ತಿದ್ದ. ಇವತ್ತು ಜಗಳ ತಾರಕಕ್ಕೇರಿದೆ. ಕುಪಿತಗೊಂಡ ಜಿನ್ನಪ್ಪಾ ಕೈಯಲ್ಲಿದ್ದ ಹರಿತವಾದ ಆಯುಧದಿಂದ ಭರತೇಶ್ ತಲೆಗೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಭರತೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.