ಮನೆ ರಾಜ್ಯ ಬೈಕ್’ಗೆ ಕೆಎಸ್’ಆರ್’ಟಿಸಿ ಬಸ್ ಢಿಕ್ಕಿ: ಹೂ ಬೆಳೆಗಾರ ಸಾವು

ಬೈಕ್’ಗೆ ಕೆಎಸ್’ಆರ್’ಟಿಸಿ ಬಸ್ ಢಿಕ್ಕಿ: ಹೂ ಬೆಳೆಗಾರ ಸಾವು

0

ದೇವನಹಳ್ಳಿ: ಕೆ.ಎಸ್.ಆರ್.ಟಿ.ಸಿ ಬಸ್ ಬೈಕ್’ಗೆ ಢಿಕ್ಕಿ ಹೊಡೆದ ಪರಿಣಾಮ ಹೂವು ಬೆಳೆಗಾರರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ ಜಿಲ್ಲಾಧಿಕಾರಿ ಕಚೇರಿ ಬಳಿಯ ಬೀರಸಂದ್ರ ಕ್ರಾಸ್ ಬಳಿ ಇಂದು ಬೆಳಗ್ಗೆ ನಡೆದಿದೆ.

Join Our Whatsapp Group

ಬೈರನಹಳ್ಳಿಯ ನಿವಾಸಿ ರಮೇಶ್ (53) ಮೃತರು.

ಇವರು ಬೆಳಗ್ಗೆ ಮಗಳನ್ನು ಕಾಲೇಜಿಗೆ ಬಿಟ್ಟು ಹೂವನ್ನು ಮಾರುಕಟ್ಟೆಗೆ ಹಾಕಲು ದೊಡ್ಡಬಳ್ಳಾಪುರಕ್ಕೆ ಬೈಕ್​ನಲ್ಲಿ ಹೋಗುತ್ತಿದ್ದರು. ಏಕಮುಖ ರಸ್ತೆಯಲ್ಲಿ ಅತಿವೇಗವಾಗಿ ಬಂದ ಬಸ್ ರಮೇಶ್ ಬೈಕ್​’ಗೆ ಡಿಕ್ಕಿ ಹೊಡೆದಿದೆ.

ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು ಬಸ್ ಏಕಮುಖ ರಸ್ತೆಯಲ್ಲಿ ಬಂದಿದ್ದು ಘಟನೆ ಜರುಗಲು ಕಾರಣವಾಗಿದೆ. ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ಸೂಚನ ಫಲಕಗಳು ಮತ್ತು ತಡೆಗೋಡೆ ಹಾಕದೇ ಇರುವುದರಿಂದ ರಸ್ತೆ ಅಪಘಾತಗಳು ನಡೆಯುತ್ತಿವೆ ಎಂದು ಸಾರ್ವಜನಕರು ಹೇಳಿದ್ದಾರೆ.

ಇಂದು ಘಟನೆ ನಡೆದ ಬಳಿಕ ಸ್ಥಳದಿಂದ ಶವವನ್ನು ಸಾಗಿಸಲು ಅವಕಾಶ ನೀಡದ ಸ್ಥಳೀಯರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ರಸ್ತೆ ತಡೆದು ಪ್ರತಿಭಟಿಸಿದರು.