ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜ : ಓ… ಅರಿಯರ್ಸ್ ಬಂದಾಗ ಖಂಡಿತ ಕೊಡ್ತೀನಿ

ಸುಬ್ಬ : ಮೊನ್ನೆ ಅರಿಯರ್ಸ್ ಬಂತಲ್ಲ

ರಾಜ : ಅದು ಅರಿಯರ್ಸ್ಅಲ್ಲ, ಬ್ಯಾಕ್ ವೇಜಸ್ ಅಂತ

“ನಿನ್ನ ಬಲಗೆನ್ನೆ ಯಾಕೆ ಉದಿದೆ ಗುಂಡಣ್ಣ?” “ನನ್ನ ಹೆಂಡತಿ ಎಡಚಿ ಸದಾ ಎಡಗೈ ಮುಂದು”

****

ನರೇಶ : ಶಾಸ್ತ್ರಿಗಳು ಸುರೇಶನಿಗೆ ಭವಿಷ್ಯ ಹೇಳ್ತಾ ನೀನು ಬಿಲ್ಲಿನಿಂದ ಹತನಾಗ್ತಿಯಾ ಅಂತ ಹೇಳಿದ್ದು ಮೊನ್ನೆ ನಿಜವಾಯಿತು.

ಗಣಪತಿ : ಯಾರಪ್ಪ ಯಾರ ಬಿಲ್ಲಿನಿಂದ ಸತ್ತ ಸುರೇಶ.

ನರೇಶ : ಯಾರ ಬಾಣವು ಅಲ್ಲ, ಯಾರ ಬಿಲ್ವೋ ಅಲ್ಲ. ಮೊನ್ನೆ ಅವನು ಆಫೀಸಿನಿಂದ ಬಂದಾಗ ಅವನ ಹೆಂಡತಿ ಶಾಪಿಂಗ್ ಮಾಡಿ ತಂದಿಟ್ಟ 36,000 ಬಿಲ್ಲು ಟೇಬಲ್ ಮೇಲಿತ್ತು ಅದನ್ನ ನೋಡಿ ಹೃದಯಘಾತವಾಗಿ ಸತ್ತ.

*****

ಗಣೇಶ : ಏನಯ್ಯ ಸುಳ್ಳು ಹೇಳೋದನ್ನ ಬಿಡ್ತೀನಿ ಅಂದಿದ್ದೆ

ಸುಬ್ಬ : ಹೊರಗಡೆ ಸುಳ್ಳು ಹೇಳೋದನ್ನ ಬಿಡಬಹುದು ಆದರೆ ಮನೆಯಲ್ಲಿ ಕಷ್ಟ

ಗಣೇಶ:  ಯಾಕೆ ?

ಸುಬ್ಬು :ಯಾಕಂದ್ರೆ ಅವಳು ಮಾಡಿದ ಅಡುಗೇನ, ತಿಂಡಿನ, ಜೊತೆಗೆ ಅವಳನ್ನ, ಅವಳು ಮಾಡೋ ಕೆಲಸಾನ ಹೊಗಳಬೇಕಲ್ವಾ.