“ಸಂವಿಧಾನವೇ ಶ್ರೇಷ್ಠ. ಇದರಡಿಯಲ್ಲಿ ಎಲ್ಲರಿಗೂ ಸಮಪಾಲು, ಸಮಬಾಳು’ ಎನ್ನುತ್ತಾ ಈರೇಗೌಡ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂದೆ ಕರ್ಪೂರ ಹಚ್ಚಿ, ದೇವರಿಗೆಂದು ತಂದಿದ್ದ ಹೂವನ್ನು ಅಲ್ಲೇ ಇಟ್ಟು ಕೈ ಮುಗಿದು, ಇದೇ ನನ್ನ ಪೂಜೆ ಎನ್ನುತ್ತಾನೆ…- ಇದು ಈ ವಾರ ತೆರೆಕಂಡಿರುವ “ತೋತಾಪುರಿ-2′ ಚಿತ್ರದ ಒಂದು ಅರ್ಥಪೂರ್ಣ ದೃಶ್ಯ.
ಕೇವಲ ಇದೊಂದೇ ಅಲ್ಲ, ಇಂತಹ ಅರ್ಥಪೂರ್ಣವಾದ ಹಾಗೂ ಇವತ್ತಿನ ಸಂದರ್ಭಕ್ಕೆ ಹೆಚ್ಚು ಕನೆಕ್ಟ್ ಆಗುವ ಹಲವು ದೃಶ್ಯಗಳಿವೆ. ಅಲ್ಲಿಗೆ “ತೋತಾಪುರಿ’ ಮೊದಲ ಭಾಗ ನೋಡಿ, “ಡಬಲ್ ಮೀನಿಂಗ್ಗೆಂದೇ ಸಿನಿಮಾ ಮಾಡಿದ್ದಾರೆ’ ಎಂದು ಮುನಿಸಿಕೊಂಡಿದ್ದವರಿಗೆ “ತೋತಾಪುರಿ-2′ ಚಿತ್ರ ಖುಷಿ ಕೊಡಬಹುದು. ಹಾಗಂತ ಈ ಚಿತ್ರದಲ್ಲಿ ಡಬಲ್ ಮೀನಿಂಗ್, ಪೋಲಿ ಮಾತುಗಳು ಇಲ್ಲವೇ ಇಲ್ಲ ಎಂದಲ್ಲ. ಪಡ್ಡೆಗಳನ್ನು ಖುಷಿಪಡಿಸಲು, ಶಿಳ್ಳೆ ಚಪ್ಪಾಳೆ ಗಿಟ್ಟಿಸಲು, ಊಟದ ಮಧ್ಯೆ ಇರುವ ಜೀರಿಗೆ ಮೆಣಸಿನ ತರಹ ಒಂದಷ್ಟು ಡೈಲಾಗ್ಸ್ಗಳಿವೆ. ಆದರೆ, ಈ ಬಾರಿ ಅದನ್ನೇ ಸಿನಿಮಾ ಮಾಡಿಲ್ಲ. ಬದಲಾಗಿ ಒಂದೊಳ್ಳೆಯ ಕಥೆಯೂ ಇಲ್ಲಿ ತೆರೆದುಕೊಳ್ಳುತ್ತದೆ.
ಮೊದಲ ಭಾಗದ ಕೊನೆಯಲ್ಲಿ ಬಂದು ದರ್ಶನ ನೀಡಿದ ನಟ ಧನಂಜಯ್ ಇಲ್ಲಿ ಸಿನಿಮಾವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಅವರದು ಲವ್ಟ್ರ್ಯಾಕ್ ಆದರೆ, ಜಗ್ಗೇಶ್ ಕಾಮಿಡಿ ಮೂಲಕ ನಗಿಸುತ್ತಾ ಹೋಗಿದ್ದಾರೆ. ಆ ಮಟ್ಟಿಗೆ “ತೋತಾಪುರಿ-2′ ಡಬಲ್ ರುಚಿ ಕೊಡುವ ಸಿನಿಮಾ. ಮಾಸ್-ಕ್ಲಾಸ್ ಎಲ್ಲವನ್ನು ಒಟ್ಟಿಗೆ ತನ್ನ “ಒಡಲಲ್ಲಿ’ ಹಾಕಿಕೊಂಡಿರುವ ಈ ಸಿನಿಮಾದಲ್ಲಿ ಜಾತಿ-ಧರ್ಮ ಮುಖ್ಯವಲ್ಲ. ಮನುಷ್ಯ ಸಂಬಂಧವಷ್ಟೇ ಮುಖ್ಯ ಎಂಬ ಸಂದೇಶವೂ ಇದೆ. ಅದನ್ನು ಹಲವು ಅರ್ಥಪೂರ್ಣ ದೃಶ್ಯಗಳ ಮೂಲಕ ಹೇಳಲಾಗಿದೆ.
ಚಿತ್ರದಲ್ಲಿ ಎರಡು ಲವ್ಟ್ರ್ಯಾಕ್ಗಳಿವೆ. ಅವೆರಡಕ್ಕೂ ಬೇರೆ ಬೇರೆ ಹಿನ್ನೆಲೆಗಳಿವೆ. ಕಾಮಿಡಿ ಜೊತೆಗೆ ಹಲವು ಗಂಭೀರ ವಿಚಾರಗಳೊಂದಿಗೆ ಸಾಗುವ ಸಿನಿಮಾ “ತೋತಾಪುರಿ’. ಹಾಗಂತ ಇಲ್ಲಿ ಗಂಭೀರ ದೃಶ್ಯಗಳು ತುಂಬಾ ಹೊತ್ತು ಕಾಡುತ್ತವೆ ಎನ್ನುವಂತಿಲ್ಲ. ಏಕೆಂದರೆ ಅದರ ಬೆನ್ನಲ್ಲೇ ಕಾಮಿಡಿ ದೃಶ್ಯವೊಂದು ಬಂದು ಕಿರುನಗೆಗೆ ಕಾರಣವಾಗುತ್ತವೆ.
ನಟ ಜಗ್ಗೇಶ್ ಹಾಗೂ ಧನಂಜಯ್ ಈ ಸಿನಿಮಾದ ಹೈಲೈಟ್. ಇಬ್ಬರು ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಅದಿತಿ, ಸುಮನ್, ವೀಣಾ ಸುಂದರ್, ದತ್ತಣ್ಣ, ಹೇಮಾದತ್ ಸೇರಿದಂತೆ ಇತರರು ಕಥೆಗೆ ಪೂರಕವಾಗಿದ್ದಾರೆ. ಫ್ರೆಂಡ್ಸ್ ಜೊತೆ ಫನ್ಟೈಮ್ಗೆ “ತೋತಾಪುರಿ-2′ ಸವಿಯಬಹುದು.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.