ಮನೆ ಸ್ಥಳೀಯ ಶ್ರೀರಂಗಪಟ್ಟಣ ಕಾವೇರಿ ನದಿ ತೀರದಲ್ಲಿ ದೀಪಾರತಿ

ಶ್ರೀರಂಗಪಟ್ಟಣ ಕಾವೇರಿ ನದಿ ತೀರದಲ್ಲಿ ದೀಪಾರತಿ

0

ಶ್ರೀರಂಗಪಟ್ಟಣ: ವೇದಬ್ರಹ್ಮ ಗುರೂಜಿ  ಡಾ. ಭಾನುಪ್ರಕಾಶ್ ಶರ್ಮ ರವರ ನೇತೃತ್ವದಲ್ಲಿ ಯುವ ಬ್ರಿಗೇಡ್ ವತಿಯಿಂದ ಕಾವೇರಿ ನದಿಯ ತೀರದ ದೀಪಾರತಿಯನ್ನು ಭಕ್ತಿ ಹಾಗೂ ಶ್ರದ್ಧೆಯಿಂದ ಅತ್ಯಂತ ಸುಂದರವಾಗಿ ಹಾಗೂ ಗೌರವಯುತವಾಗಿ ಭಾನುವಾರ ಸಂಜೆ ನಡೆಸಲಾಯಿತು.

ಕಾವೇರಿ ನದಿ ತೀರದಲ್ಲಿ ನೆರೆದಿದ್ದ ಜನರು ಆ ಸುಂದರ ದೃಶ್ಯವನ್ನು ಕಣ್ತುಂಬಿಕೊಂಡು ಆನಂದ ಪಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹೊಸದುರ್ಗ ಮಧುರೆಯ ಭಗೀರಥ ಉಪ್ಪಾರ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ,  ಶ್ರೀರಂಗಪಟ್ಟಣ ಹೊರವಲಯದ ಪೂರ್ವವಾಹಿನಿಯ ಚಂದ್ರವನ ಮಠದ ಪೀಠಾಧಿಪತಿ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಜಿ, ಯುವಬ್ರಿಗೇಡ್ ನ ದಕ್ಷಿಣ ರಾಜ್ಯ ಸಂಚಾಲಕ ಧರ್ಮ ಹೊನ್ನಾರಿ,  ವ ಬ್ರಿಗೇಡ್ ಮುಖ್ಯಸ್ಥ ರಂಜಿತ್, ವೇದಬ್ರಹ್ಮ ಲಕ್ಷ್ಮೀಶ ಶರ್ಮ  ಸಂಘಟಕ ಪ್ರವೀಣ್, ಇತಿಹಾಸ ತಜ್ಞ ಶೆಲ್ವಪಿಳ್ಳೈ ಅಯ್ಯಂಗಾರ್ ಭಾಗವಹಿಸಿದ್ದರು.