ಮನೆ ಕಾನೂನು ವಿಕಲಚೇತನ ಮಗ, ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡದ ಪತಿ: ಆಸ್ತಿ ಮುಟ್ಟುಗೋಲಿಗೆ ಹೈಕೋರ್ಟ್ ಆದೇಶ

ವಿಕಲಚೇತನ ಮಗ, ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡದ ಪತಿ: ಆಸ್ತಿ ಮುಟ್ಟುಗೋಲಿಗೆ ಹೈಕೋರ್ಟ್ ಆದೇಶ

0

ಬೆಂಗಳೂರು: ವಿಚ್ಛೇದಿತ ಪತ್ನಿ ಮತ್ತು ವಿಕಲಚೇತನ ಮಗನಿಗೆ ಜೀವನಾಂಶ ಪಾವತಿಸದ ವ್ಯಕ್ತಿಯ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಪತಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನಿರ್ದೇಶನ ನೀಡಿದೆ.

Join Our Whatsapp Group

ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಅನಂತ್ ರಾಮನಾಥ್ ಹೆಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, 2012ರ ಏಪ್ರಿಲ್ 12ರಿಂದ ಮಾಸಿಕ ಜೀವನಾಂಶವಾಗಿ ತಲಾ 5000 ರೂ.ಗಳನ್ನು ಪಾವತಿಸುವಂತೆ ಸೂಚನೆ ನೀಡಿ ಆದೇಶಿಸಿತ್ತು.

ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಪತಿಯ 1,276 ಚದರ್​ ಅಡಿ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಪತ್ನಿ ಇತರ ಆಸ್ತಿ ವಿವರಗಳನ್ನು ಒದಗಿಸಿದರೆ, ಅದರಲ್ಲಿಯೂ ಸಹ ಭಾಗಿದಾರರಾಗಿರುತ್ತಾರೆ ಎಂದು ಪೀಠ ಹೇಳಿದೆ. ವಾದ ಆಲಿಸಿದ ಪೀಠ, ನಿರ್ವಹಣೆಯನ್ನು ತಲಾ 5,000 ರೂ.ಗೆ ಹೆಚ್ಚಿಸಿತು. ಮಗ ವಿಕಲಚೇತನ ಆಗಿರುವುದರಿಂದ, ಮೊತ್ತವು ಸಾಧಾರಣವಾಗಿದೆ ಮತ್ತು ಕೌಟುಂಬಿಕ ನ್ಯಾಯಾಲಯಕ್ಕೆ ಅನುಗುಣವಾಗಿ ಆದೇಶಿಸಬೇಕಾಗಿತ್ತು ಎಂದು ಪೀಠ ಹೇಳಿದೆ.

ಪತಿ ಕೌಟುಂಬಿಕ ನ್ಯಾಯಾಲಯವು ತನ್ನ ಮೇಲೆ ವಿಧಿಸಿದ ಹೊಣೆಗಾರಿಕೆಯನ್ನು ನಿರ್ವಹಿಸಿಲ್ಲ. 1882ರ ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 39ರ ಅಡಿಯಲ್ಲಿ, ನಿರ್ವಹಣೆಯ ಬಾಕಿಯು ಆಸ್ತಿಯ ಮೇಲೆ ಶುಲ್ಕವನ್ನಾಗಿಸುವುದಕ್ಕೆ ಅವಕಾಶವಿದೆ. ಪತಿ ಯಾದವರು ಈ ಹಿಂದಿನ ಆದೇಶವನ್ನು ಪಾಲಿಸಿಲ್ಲ. ಆದ್ದರಿಂದ ಅರ್ಜಿದಾರರಿಗೆ (ಪತ್ನಿ ಮತ್ತು ಮಗ) ಪಾವತಿಯ ಆಸ್ತಿಯ ಮೇಲೆ ಭಾಗ ಪಡೆಯಬಹುದು ಎಂದು ಪೀಠ ಅಭಿಪ್ರಾಯ ಪಟ್ಟಿದೆ.

ಪ್ರಕರಣದ ಹಿನ್ನೆಲೆ; 2002ರಲ್ಲಿ ಪತಿಯ ಮನೆಯಿಂದ ಹೊರನಡೆದಿದ್ದ ಮಹಿಳೆ, ತನಗೆ ಮತ್ತು ಮಗನಿಗೆ ಜೀವನಾಂಶ ನೀಡುವಂತೆ ಕೋರಿದ್ದರು. ಆರಂಭದಲ್ಲಿ ಪತ್ನಿ ಮತ್ತು ಮಗನಿಗೆ ಕ್ರಮವಾಗಿ 2000 ಮತ್ತು 1000 ರೂ.ಗಳ ಮಾಸಿಕ ಮೊತ್ತವನ್ನು ನೀಡಲಾಯಿತು. ಒಂದು ದಶಕದ ನಂತರ, ಪತ್ನಿ ಮತ್ತು ಅವರ ಮಗ ತಲಾ 5000 ರೂ.ಗೆ ಹೆಚ್ಚಿಸಲು ಕೋರಿದರು. ಸೆಪ್ಟೆಂಬರ್ 2018 ರಲ್ಲಿ, ಕೌಟುಂಬಿಕ ನ್ಯಾಯಾಲಯವು ಪತಿಗೆ ತಲಾ 3000 ರೂ.ಗಳನ್ನು ಪಾವತಿಸುವಂತೆ ನಿರ್ದೇಶನ ನೀಡಿತ್ತು.

ಆದರೆ, ಮೊತ್ತವನ್ನು ಮತ್ತಷ್ಟು ಹೆಚ್ಚಳ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ಪರಿಹಾರ ಮೊತ್ತ ಕಡಿಮೆಯಿದೆ. ಆದ್ದರಿಂದ ಹೆಚ್ಚಳ ಮಾಡಬೇಕು. ಜತೆಗೆ, ಪತಿ ಬಾಕಿ ಪಾವತಿಸಿಲ್ಲ ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪತಿ ಕೆಲವು ಸ್ಥಿರಾಸ್ತಿಗಳನ್ನು ಮಾರಾಟ ಮಾಡಿದ್ದಾರೆ, ತಿಂಗಳಿಗೆ 5000 ರೂ.ಗಳನ್ನು ಪಾವತಿಸಬಹುದು ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕೋರಿದ್ದರು.