ಮನೆ ಅಪರಾಧ ಕೌಟುಂಬಿಕ ಕಲಹ: ಗೃಹಣಿ ಆತ್ಮಹತ್ಯೆ

ಕೌಟುಂಬಿಕ ಕಲಹ: ಗೃಹಣಿ ಆತ್ಮಹತ್ಯೆ

0

ಕುಣಿಗಲ್: ಕೌಟುಂಬಿಕ ಕಲಹಕ್ಕೆ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಎಡಿಯೂರು ಹೋಬಳಿ ಸಿಂಗೋನಹಳ್ಳಿ ಅಗ್ರಹಾರದಲ್ಲಿ ಗ್ರಾಮದಲ್ಲಿ ಸೆ.4ರ ಬುಧವಾರ ನಡೆದಿದೆ.

Join Our Whatsapp Group

ಅಮೃತ್ತೂರು ಹೋಬಳಿ ಹೊಳಲಗುಂದ, ಹಾಲಿ ಬೆಂಗಳೂರು ನಿವಾಸಿ ರಕ್ಷಿತಾ (19) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.

ಸಿಂಗೋನಹಳ್ಳಿ ಗ್ರಾಮದ ಅಂಜನ್ ಕುಮಾರ್ ಹಾಗೂ ರಕ್ಷಿತಾ ಪ್ರೀತಿಸಿ, 6 ತಿಂಗಳ ಹಿಂದೆ ಮದುವೆಯಾಗಿದ್ದರು. ಸಾಂಸಾರಿಕ ಜೀವನದಲ್ಲಿ ಬಿರುಕು ಉಂಟಾಗಿ ರಕ್ಷಿತಾ  ಸಿಂಗೋನಹಳ್ಳಿ ಅಗ್ರಹಾರ ಗ್ರಾಮದ ಅವರ ಮನೆಯಲ್ಲಿ ತನ್ನ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಮೃತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.