ಮನೆ ಅಪರಾಧ ದಸರಾ ಆನೆ ‘ಬಲರಾಮ’ನಿಗೆ ಗುಂಡು ಹಾರಿಸಿದ್ದ ವ್ಯಕ್ತಿಯ ಬಂಧನ

ದಸರಾ ಆನೆ ‘ಬಲರಾಮ’ನಿಗೆ ಗುಂಡು ಹಾರಿಸಿದ್ದ ವ್ಯಕ್ತಿಯ ಬಂಧನ

0

ಪಿರಿಯಾಪಟ್ಟಣ(Periyapattana): ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಹೆಗ್ಗಳಿಕೆಯ ‘ಬಲರಾಮ’ ಆನೆಗೆ ಗುಂಡು ಹಾರಿಸಿದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಜಮೀನಿನ ಮಾಲೀಕ ಸುರೇಶ್ ಬಂಧಿತ ಆರೋಪಿ.

ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಸರ್ವೆ ನಂ. 27ರ ಜಮೀನಿಗೆ ಗುರುವಾರ ರಾತ್ರಿ ‘ಬಲರಾಮ’ ಬಂದಿದ್ದು, ಸಿಟ್ಟಿಗೆದ್ದ ಜಮೀನಿನ ಮಾಲೀಕ ಸುರೇಶ್‌ ಗುಂಡು ಹಾರಿಸಿದ್ದನು.

ಆನೆಯ ತೊಡೆ ಬಳಿ ಗುಂಡು ಹೊಕ್ಕಿದ್ದು, ಚೇತರಿಸಿಕೊಳ್ಳುತ್ತಿದೆ.

ಕೃತ್ಯ ಎಸಗಿದ್ದ ಆರೋಪದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಒಂಟಿ ನಳಿಕೆಯ ಕೋವಿ ಹಾಗೂ ಕಾಡತೂಸುಗಳನ್ನು ವಶಕ್ಕೆ ಪಡೆಯಲಾಗಿದೆ. ಬಲರಾಮನ ತೊಡೆ ಬಳಿ ಗುಂಡು ಹೊಕ್ಕಿದ್ದು, ಆನೆಗೆ ಯಾವುದೇ ಪ್ರಾಣಾಪಾಯ ಇಲ್ಲ ಎಂದು ಆರ್‌’ಎಫ್‌’ಒ ರತನ್‌ಕುಮಾರ್‌ ತಿಳಿಸಿದರು.

ವಜ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಹಿಂದಿನ ಲೇಖನಹೈದರಾಬಾದ್: ಮನೆಗೆ ಆಕಸ್ಮಿಕ ಬೆಂಕಿ- ಒಂದೇ ಕುಟುಂಬದ 6 ಮಂದಿ ಸಜೀವ ದಹನ
ಮುಂದಿನ ಲೇಖನವಿರಕ್ತ ಮಠದಲ್ಲಿ ಅವಿರಕ್ತ ನಡೆ ಸರಿಯೇ ? : ಹೈಕೋರ್ಟ್